ತೆಲಂಗಾಣದಲ್ಲಿ ದಾಖಲೆಗಳಿಲ್ಲದ 10 ಕೋ.ರೂ.ವಶ, ಇಬ್ಬರ ಬಂಧನ

Update: 2018-10-20 13:34 GMT

ಹೈದರಾಬಾದ್,ಅ.20: ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ,ಆದಿಲಾಬಾದ್ ಜಿಲ್ಲೆಯ ಪಿಪ್ಪರವಾಡಾ ಟೋಲ್ ಪ್ಲಾಝಾದಲ್ಲಿ ಶುಕ್ರವಾರ ಕಾರೊಂದರಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 10 ಕೋ.ರೂ.ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಲಿದ್ದು,ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ.

2,000 ಮತ್ತು 5,00 ರೂ.ಮುಖಬೆಲೆಯ ನೋಟುಗಳನ್ನು ಐದು ಗೋಣಿಚೀಲಗಳಲ್ಲಿ ತುಂಬಿಸಲಾಗಿತ್ತು ಎಂದು ತಿಳಿಸಿದ ಆದಿಲಾಬಾದ್ ಡಿಎಸ್‌ಪಿ ನರಸಿಂಹ ರೆಡ್ಡಿ ಅವರು,ತಾವು ವ್ಯಾಪಾರಿಗಳಾಗಿದ್ದು ನಾಗ್ಪುರದಿಂದ ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದೆವು ಎಂದು ಬಂಧಿತರು ಹೇಳಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದು,ಆದಾಯ ತೆರಿಗೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News