ಶಾಸಕರಾದ ಪಿ.ಬಿ ಅಬ್ದುರ್ರಝಾಕ್ ನಿಧನಕ್ಕೆ ಸಂತಾಪ ಸೂಚನೆ

Update: 2018-10-20 14:52 GMT

ಕಾಸರಗೋಡು, ಅ. 20: ಇಂಡಿಯಾನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಮತ್ತು ರಾಜ್ಯ ಕಾರ್ಯಕಾರಣಿ ಸದಸ್ಯರು, 2011 ಮತ್ತು 2016ನೇ ಸಾಲಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ಪಿ.ಬಿ. ಅಬ್ದುರ್ರಝಾಕ್ ಅವರ ನಿಧನಕ್ಕೆ ಎಂಎಸ್ಎಫ್ ಸಂತಾಪ ಸೂಚಿಸಿದೆ.

ಮಂಜೇಶ್ವರ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ, ಬಡವರಿಗೆ ಆಸರೆಯನ್ನು ನೀಡಿ, ಜನ ಸೇವೆಯಲ್ಲಿಯೇ ಸದಾ ತೊಡಗಿಸಿಕೊಂಡು ಕ್ಷೇತ್ರದ ಜನತೆ ಯೊಂದಿಗೆ ಸದಾ ಬೆರೆತುಕೊಂಡ ಇವರು ಧಾರ್ಮಿಕ ಸೇವೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದರು. ಸುನ್ನಿ ಮಹಲ್ ಫೆಡರೇಶನ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ, ಸಂಯುಕ್ತ ಜಮಾಅತ್ ಕಾರ್ಯಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿಯೂ, ಗಡಿ ಪ್ರದೇಶದ ವಿಷಯದಲ್ಲಿ ಕನ್ನಡದ ಮೂಲಕ ಕೇರಳ ವಿಧಾನಸಭೆಯಲ್ಲಿ ಧ್ವನಿಯೆತ್ತುವ ಮೂಲಕ ಕರ್ನಾಟಕದ ಜನತೆಯ ಮನಗೆದ್ದ ನಾಯಕರೂ ಆಗಿದ್ದಾರೆ.ಇವರ ಅಕಾಲಿಕ ನಿಧನಕ್ಕೆ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿದ್ಧೀಖ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಟಿ.ಯು ಬಿ.ಸಿ.ರೋಡು , ಕೋಶಾಧಿಕಾರಿ ತಬೂಕು ದಾರಿಮಿ , ಮುಸ್ಲಿಂ ಯೂತ್ ಲೀಗ್ ಜಿಲ್ಲಾಧ್ಯಕ್ಷ ಸಿದ್ಧೀಖ್ ತಲಪಾಡಿ, ಪ್ರ.ಕಾರ್ಯದರ್ಶಿ ಅಬ್ದುಸ್ಸಮದ್ ಸಾಲೆತ್ತೂರು, ಕಾರ್ಯದರ್ಶಿ ಫಯಾಝ್ ಬಿ.ಕೆ ಜೋಕಟ್ಟೆ , ಎಂಎಸ್ಎಫ್ ರಾಷ್ಟ್ರೀಯ ಕೋಶಾಧಿಕಾರಿ ನೌಶಾದ್ ಮಲಾರ್, ಎಂಎಸ್ಎಫ್ ರಾಜ್ಯಾಧ್ಯಕ್ಷ ಅಡ್ವಕೇಟ್ ಜಲೀಲ್ ನಂದಾವರ , ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾತಿಷಾ ಕೊಡಗು , ಕಾರ್ಯದರ್ಶಿ ಗಳಾದ ಮುನಾಝ್ ತೋಡಾರು , ಕೆ.ಟಿ.ಆರ್ ನವಾಝ್ ಕಟ್ಟತ್ತಾರು , ಫಾಝಿಲ್ ಪೇರಿಮಾರ್ , ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಅಕ್ಮಲ್ ಬಾಷ, ಎಂಎಸ್ಎಫ್ ದ.ಕ ಜಿಲ್ಲಾಧ್ಯಕ್ಷ ಇಶ್ರಾರ್ ಗೂಡಿನಬಳಿ , ಪ್ರಧಾನ ಕಾರ್ಯದರ್ಶಿ ಶಾರೂಖ್ ಪರ್ಲಿಯಾ, ಕೋಶಾಧಿಕಾರಿ ಇಮ್ತಿಯಾಝ್ ಜೋಕಟ್ಟೆ, ಕಾಮಿಲ್ ಜೋಕಟ್ಟೆ , ನಿಸಾರ್ ಅಹ್ಮದ್ ಬೆಂಗ್ರೆ, ಶಾದೀನ್ ಕುಕ್ಕಾಜೆ, ಅನೀಸ್ ಸೂರಿಂಜೆ , ದಾವೂದ್ ಹಕೀಂ ಜೋಕಟ್ಟೆ , ಸಿದ್ಧೀಖ್ ಮುನೀರ್ ಆತೂರು , ಫಯಾಝ್ ಅಡ್ಡೂರು ,ಮುನವ್ವರ್ ಅಡ್ಡೂರು , ಸಫ್ವಾನ್ ಕಣ್ಣೂರು ಹಾಗೂ ಎಂಎಸ್ಎಫ್ ಕ್ಷೇತ್ರ ಸಮಿತಿ, ಗ್ರಾಮ ಸಮಿತಿ  ನಾಯಕರು ಸಂತಾಪ ಸೂಚಿಸಿದ್ದಾರೆ.

ವಿವಿಧ ಸಂಘಟನೆಗಳ ಮುಖಂಡರ ಸಂತಾಪ

ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ಅಧ್ಯಕ್ಷ ಹಾಜಿ ಇಬ್ರಾಹೀಂ ದಸ್ತಗಿರ್ ಆಗ, ಉಪಾಧ್ಯಕ್ಷ ಸಿ. ಅಹ್ಮದ್ ಜಮಾಲ್, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಜ್ ಕೆ.ಎಸ್. ಮುಹಮ್ಮದ್ ಮಸೂದ್, ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಪ್ರಮುಖರಾದ ಹಾಜಿ ಸೈಯದ್ ಬಾಷಾ ತಂಙಲ್, ಹಾಜಿ ಎಸ್. ಸುಲೈಮಾನ್, ರಿಯಾಝ್ ಹರೇಕಳ, ಹಾಜಿ ಯು.ಎಚ್. ಅಹ್ಮದ್ ಬಾವ, ಮುಹಮ್ಮದ್ ಇಸ್ಮಾಯೀಲ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News