ಉಳಿತೊಟ್ಟು ಅಲ್-ಇಖ್ವಾನ್ ಕಮಿಟಿಯ ನೂತನ ಪದಾಧಿಕಾರಿಗಳ ಆಯ್ಕೆ

Update: 2018-10-20 15:48 GMT
ರಫೀಕ್ ಉಳಿತೊಟ್ಟು - ಹೈದರ್ ತಾಜ್

ನೆಲ್ಯಾಡಿ, ಅ. 20 : ಅಲ್-ಇಖ್ವಾನ್ ಕಮಿಟಿ ಉಳಿತೊಟ್ಟು, ನೆಲ್ಯಾಡಿ  ಇದರ ವಾರ್ಷಿಕ ಮಹಾ ಸಭೆ ಮಸೀದಿ ಖತೀಬ್ ಉಸ್ತಾದ್ ಅಬ್ದುಲ್ ಮಜೀದ್ ಅಹ್ಸನಿ ಅಧ್ಯಕ್ಷತೆಯಲ್ಲಿ ಸದರ್ ಉಸ್ತಾದ್ ಅಝೀಝ್ ಮುಸ್ಲಿಯಾರ್ ಅವರ ಉದ್ಘಾಟನೆಯೊಂದಿಗೆ ಜರಗಿತು.

ನೂತನ ಅಧ್ಯಕ್ಷರಾಗಿ ರಫೀಕ್ ಉಳಿತೊಟ್ಟು ಪ್ರ. ಕಾರ್ಯದರ್ಶಿಯಾಗಿ ಹೈದರ್ ತಾಜ್ ಕೋಶಾಧಿಕಾರಿಯಾಗಿ ಸಮೀರ್ ಝಂ.ಝಂ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ದಾವೂದ್ ಬಿಲಾಲ್, ಸಿದ್ದೀಕ್ ನಿರ್ಮಾ ಕಾರ್ಯದರ್ಶಿಗಳಾಗಿ ಸಮೀರುದ್ದೀನ್ ಪಡುಬೆಟ್ಟು, ನೌಫಲ್ ಯು. ಎ. ಅವಿರೋಧವಾಗಿ ಆಯ್ಕೆಮಾಡಲಾಯಿತು.

ಆಡಳಿತ ಸಮಿತಿ ಸದಸ್ಯರಾಗಿ ಅಬ್ಬಾಸ್ ಪೊಯ್ಯತಡ್ಡ, ಸಮೀರ್ ತಾಜ್, ನಝೀರ್, ನೌಶಾದ್ ಯು.ಎ., ಶಬ್ಬೀರ್ ಸಾಹೇಬ್, ಫಾರೂಕ್ ಎನ್.ಪಿ. ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಜಮಾಅತ್ ಅಧ್ಯಕ್ಷ ಹಾಜಿ ಯೂಸುಫ್ ಬಿಲಾಲ್, ಕಮಿಟಿಯ ನಿಕಟಪೂರ್ವ ಅಧ್ಯಕ್ಷ ಶಬ್ಬೀರ್ ಸಾಹೇಬ್ ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಹೈದರ್ ತಾಜ್ ವಾರ್ಷಿಕ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.

ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ, ಹೈದರ್ ತಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News