ಸಿದ್ಧಲಿಂಗ ಸ್ವಾಮೀಜಿ ನಿಧನ: ಪೇಜಾವರ ಶ್ರೀ ಸಂತಾಪ
Update: 2018-10-20 16:00 GMT
ಉಡುಪಿ, ಅ.20: ಗದುಗಿನ ತೋಟದಾರ್ಯಮಠದ ಸಿದ್ಧಲಿಂಗ ಸ್ವಾಮೀಜಿ ನಿಧನದಿಂದ ಬಹಳ ವಿಷಾದವಾಗಿದೆ. ಕ್ರಾಂತಿಕಾರಿ ಹಾಗೂ ಪ್ರಗತಿಪರ ವಿಚಾರ ಧಾರೆವುಳ್ಳ ಅವರು ಶಿಕ್ಷಣ ಮತ್ತು ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯುಳ್ಳವರಾಗಿದ್ದರು. ಪುಸ್ತಕ ಪ್ರಕಾಶನ, ಶಿಕ್ಷಣ ಸಂಸ್ಥೆಗಳ ನಿರ್ಮಾಣ, ವ್ಯವಸಾಯ ಪರಿಸರ ರಕ್ಷಣೆ ಮುಂತಾದ ವಿವಿಧ ವಿಧಾಯಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಧೀರ, ಧೀಮಂತ ಮಠಾಧಿಪತಿಗಳಾಗಿದ್ದರು. ಅವರ ನಿಧನದಿಂದ ಕರ್ನಾಟಕಕ್ಕೆ ಆದ ಸಂತಾಪದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.