ನಿಮಾರ್ಪಕ ಮುಹಮ್ಮದ್ ಅಶ್ರಫ್ ನಿಧನ

Update: 2018-10-20 16:04 GMT

ಕುಂದಾಪುರ, ಅ.20: ಕುಂದಾಪುರದ ಖಾರ್ವಿ ಕೇರಿ ನಿವಾಸಿ ಚಲನಚಿತ್ರ ನಿರ್ಮಾಪಕ, ಮುಹಮ್ಮದ್ ಅಶ್ರಫ್ (60) ಅಲ್ಪಕಾಲದ ಅಸೌಖ್ಯದಿಂದ ತಮ್ಮ ಪತ್ನಿಯ ಮನೆಯಾದ ತಿಪಟೂರಿನಲ್ಲಿ ಅ.18ರಂದು ನಿಧನರಾದರು.

ಮೂಲತ: ಗಂಗೊಳ್ಳಿಯವರಾಗಿರುವ ಅವರು ಕುಂದಾಪುರದಲ್ಲಿ ಹಲವು ವರ್ಷಗಳಿಂದ ವಾಸವಾಗಿ ಮುಂಬೈಯಲ್ಲಿ ಉದ್ಯಮ ಹೊಂದಿದ್ದರಲ್ಲದೆ ಮೀನು ಗಾರಿಕಾ ಬೋಟುಗಳೂ ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿ ದ್ದರು. ಅನಂತ ಪ್ರೇಮ, ಭಾರತನಾರಿ ಸಹಿತ ಕೆಲವು ಕನ್ನಡ ಚಲನ ಚಿತ್ರಗಳನ್ನೂ ನಿರ್ಮಿಸಿದ್ದರು. ಅವರ ನಿಧನಕ್ಕೆ ನಟ, ನಿರ್ಮಾಪಕ ರಾಜ್ ಬಲ್ಲಾಳ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News