ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು
Update: 2018-10-20 16:08 GMT
ಕುಂದಾಪುರ, ಅ.20: ಸಮುದ್ರ ದಡದಲ್ಲಿ ಬಲೆ ಬೀಸಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರೊಬ್ಬರು ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.20ರಂದು ಬೆಳಗ್ಗೆ 6.30ರ ಸುಮಾರಿಗೆ ಗೋಪಾಡಿ ಚರ್ಕಿಕಡು ಎಂಬಲ್ಲಿ ನಡೆದಿದೆ.
ಮೃತರನ್ನು ಪಡುಗೋಪಾಡಿಯ ಸದಿಯ ಮರಕಾಲ(65) ಎಂದು ಗುರುತಿಸಲಾಗಿದೆ.
ಇವರು ಇತರರೊಂದಿಗೆ ತೀರದಲ್ಲಿ ನಿಂತು ಮೀನುಗಾರಿಕೆ ನಡೆಸು ತ್ತಿದ್ದಾಗ ಬೃಹತ್ ಅಲೆಗೆ ಸಿಲುಕಿ ಕಾಲು ಜಾರಿ ಸಮುದ್ರ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ. ಇತರರು ಕೂಡಲೇ ಇವರನ್ನು ಮೇಲಕ್ಕೆ ಎತ್ತಿ ಕೋಟೇಶ್ವರ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಸದಿಯ ಮರ ಕಾಲ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.