ಜಾಗದ ವಿವಾದ: ವಿಷ ಸೇವಿಸಿ ಆತ್ಮಹತ್ಯೆ
Update: 2018-10-20 16:09 GMT
ಬ್ರಹ್ಮಾವರ, ಅ.20: ಜಾಗದ ಪಾಲಿನ ವಿಚಾರದಲ್ಲಿ ಮನನೊಂದ ಮಹಿಳೆ ಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.19ರಂದು ಬೆಳಗ್ಗೆ ಚಾಂತಾರು ಗ್ರಾಮದ ಮಟಪಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಚಾಂತಾರು ಗ್ರಾಮದ ರತ್ನಾಕರ ವಸಂತ ನಾಯರಿ(62) ಎಂದು ಗುರುತಿಸಲಾಗಿದೆ.
ಇವರಿಗೆ ಇವರ ತಂದೆಯಿಂದ ಬರಬೇಕಾದ ಜಾಗದ ವಿಚಾರಕ್ಕೆ ಸಂಬಂಧಿಸಿ ಶಾಲಿನಿ ನಾಯರಿ, ಭರತ್ ನಾಯರಿ, ಶಶಿಕಾಂತ ನಾಯರಿ ಎಂಬವರು ಸೇರಿ ಮೋಸದಿಂದ ಖಾಲಿ ಪತ್ರಕ್ಕೆ ಸಹಿ ಮಾಡಿಸಿ, ಜಾಗವನ್ನು ಶಾಲಿನಿ ನಾಯರಿ ಹೆಸರಿಗೆ ಮಾಡಿಸಿದರೆನ್ನಲಾಗಿದೆ.
ಈ ವಿಚಾರದ ಬಗ್ಗೆ ಪ್ರಶ್ನಿಸಿದ ರತ್ನಾಕರ ವಸಂತ ನಾಯರಿಗೆ ಇವರು ಮೂವರು ಸೇರಿ ನಿನಗೆ ಯಾವುದೇ ಜಾಗ ಕೊಡುವುದಿಲ್ಲ, ಹೋಗಿ ಸಾಯಿ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದರೆಂದು ದೂರಲಾಗಿದೆ. ಇದರಿಂದ ಮಾನಸಿಕವಾಗಿ ನೊಂದ ರತ್ನಾಕರ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.