ಮಧು ಬಂಗಾರಪ್ಪ ಗೆಲುವಿಗೆ ಕಣಚೂರು ಮೋನು ಕರೆ
ಮಂಗಳೂರು, ಅ. 21: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಗೆಲುವು ಜಾತ್ಯತೀತ ಪಕ್ಷಗಳ ಒಗ್ಗೂಡಿಸುವಿಕೆಯ ಹೊಸ ದಿಕ್ಸೂಚಿಯಾಗಲಿದೆ, ಆದ್ದರಿಂದ ಮಧು ಬಂಗಾರಪ್ಪ ಅವರ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು ಹಾಜಿ ಕರೆ ನೀಡಿದ್ದಾರೆ.
ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭೆ ಕ್ಷೇತ್ರದ ನಾವುಂದ, ತ್ರಾಸಿ ಮೊದಲಾದೆಡೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯಕ್ಕೆ ಬಂಗಾರಪ್ಪ ನೀಡಿದ ಆಡಳಿತ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಸಂಶುದ್ದೀನ್, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫಾ, ನೂರುದ್ದೀನ್ ಸಾಲ್ಮರ, ಪಕ್ಷದ ಮುಖಂಡರಾದ ಅಬ್ದುಲ್ಲಾ ಹಾಜಿ ನಾವುಂದ, ಸಂಶುದ್ದೀನ್ ನಾವುಂದ, ಇಸ್ಮಾಯೀಲ್ ಹಾಜಿ, ತೌಫೀಕ್, ಸೈಯದ್ ನಾವುಂದ ಮತ್ತಿತರರು ಉಪಸ್ಥಿತರಿದ್ದರು.