​ಮುದೂರು ದೇವಳದ ಕಾಣಿಕೆ ಡಬ್ಬಿ ಕಳವು

Update: 2018-10-21 15:33 GMT

ಕೊಲ್ಲೂರು, ಅ.21: ಮುದೂರು ಗ್ರಾಮದ ಶ್ರೀಬ್ರಹ್ಮಾಲಿಂಗೇಶ್ವರ ದೇವಸ್ಥಾನಕ್ಕೆ ನ.19ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಏಳು ಕಾಣಿಕೆ ಡಬ್ಬಿಯಲ್ಲಿದ್ದ ಸಾವಿರಾರು ರೂ. ಹಣವನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಮುಖ್ಯ ಪ್ರವೇಶ ದ್ವಾರದ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು ಗರ್ಭಗುಡಿ ಬಳಿಯ ಕಾಣೆಕೆ ಡಬ್ಬಿ ಮತ್ತು ದೇವಸ್ಥಾನದ ಒಳಾಂಗಣ ಪೌಳಿಯ ಸುತ್ತಲು ಇರುವ ಪರಿವಾರ ದೇವರ ಗುಡಿಯಲ್ಲಿದ ಒಟ್ಟು 6 ಕಾಣಿಕೆ ಡಬ್ಬಿಗಳನ್ನು ಹಾನಿಗೊಳಿಸಿ ಒಟ್ಟು 20,000 ರೂ. ಹಣವನ್ನು ಕಳವು ಮಾಡಿರುವು ದಾಗಿ ದೂರಲಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News