ಉಡುಪಿ: ಬಸ್ಸಿನಲ್ಲಿ ಕುಸಿದು ಬಿದ್ದು ಬಾಲಕ ಮೃತ್ಯು
Update: 2018-10-21 15:39 GMT
ಉಡುಪಿ, ಅ.21: ತೀರ್ಥಕ್ಷೇತ್ರಗಳ ಯಾತ್ರೆಗೆ ಕುಟುಂಬದೊಂದಿಗೆ ಹೋಗಿದ್ದ ಬಾಲಕನೋರ್ವ ಮಿನಿ ಬಸ್ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಗರದ ಹೋಟೆಲ್ ಸುಖಾನಂದ ಬಳಿ ರವಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಬೆಂಗಳೂರು ಕೆ.ಜಿ.ನಗರದ ಶಿವಲಿಂಗ ಗೌಡ ಎಂಬವರ ಪುತ್ರ ಎಸ್.ವಿನಯ್ ಗೌಡ(16) ಎಂದು ಗುರುತಿಸಲಾಗಿದೆ. ಇವರು ಕುಟುಂಬದೊಂದಿಗೆ ತೀರ್ಥಯಾತ್ರೆಗಾಗಿ ಮಿನಿಬಸ್ನಲ್ಲಿ ಉಡುಪಿಗೆ ಬಂದಿದ್ದು, ನಿಲ್ಲಿಸಿದ್ದ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ವಿನಯ್ ಗೌಡ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥ ಗೊಂಡಿದ್ದರು. ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವಿನಯ್ ಗೌಡ ಮೃತಪಟ್ಟರೆನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.