ಬಂಟ್ವಾಳ : ಪಿಂಚಣಿದಾರರ ಸಂಘದಿಂದ ಸಹಾಯ ಧನ ಹಸ್ತಾಂತರ
Update: 2018-10-22 20:42 IST
ಬಂಟ್ವಾಳ, ಅ. 22: ಪಿಂಚಣಿದಾರರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ 28,001 ರೂ. ಚೆಕ್ ಅನ್ನು ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಮುಖಾಂತರ ಸಂಘದ ಪರವಾಗಿ ಅಧ್ಯಕ್ಷ ಬಿ.ತಮ್ಮಯ್ಯ ಅವರು ಸೋಮವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎ.ಲಿಂಗಪ್ಪ, ಕಾರ್ಯದರ್ಶಿ ಕೆ.ನೀಲೋಜಿರಾವ್, ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್, ಸದಸ್ಯರಾದ ದಾಮೋದರ್, ಸೇಸಪ್ಪ ಮಾಸ್ತರ್, ಎಂ.ಆರ್.ನಾಯರ್, ಸಂಕಪ್ಪ ಶೆಟ್ಟಿ, ಸುಂದರ ಮೂಲ್ಯ, ಶಾರದಾ ಎಸ್.ರಾವ್, ಮನೋಹರ್, ಚಂದ್ರಶೇಖರ ಗಟ್ಟಿ, ಪದ್ಮನಾಭ ರಾವ್ ಮತ್ತಿತರರು ಉಪಸ್ಥಿತರಿದ್ದರು.