ಕೆಎಸ್ಸಿಎ ಅಂತರ ಪ.ಪೂ.ಕಾಲೇಜು ಕ್ರಿಕೆಟ್: ಮಣಿಪಾಲದ ಮಾಧವಕೃಪಾ ಚಾಂಪಿಯನ್ಸ್
ಮಣಿಪಾಲ, ಅ.24: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಮಣಿಪಾಲದ ಮಾಧವಕೃಪಾ ಪದವಿ ಪೂರ್ವ ಕಾಲೇಜು ತಂಡ ಚಾಂಪಿಯ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮಣಿಪಾಲದ ಎಂಡ್ಪಾಯಿಂಟ್ ಮೈದಾನದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮಾಧವಕೃಪಾ ಪ.ಪೂ.ಕಾಲೇಜು ತಂಡ, ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜು ತಂಡವನ್ನು 134ರನ್ಗಳ ಭರ್ಜರಿ ಅಂತರದಿಂದ ಪರಾಭವಗೊಳಿಸಿ ಟ್ರೋಫಿಯನ್ನು ಕೈಗೆತ್ತಿಕೊಂಡಿತು.
ಮಾಧವಕೃಪಾ ಪ.ಪೂ. ಕಾಲೇಜು ತಂಡದ ಅಶ್ವಿಜ್ ಅವರ ಅಜೇಯ 105 ರನ್ಗಳ ಭರ್ಜರಿ ಬ್ಯಾಟಿಂಗ್ ಹಾಗೂ ಅತೀಶ್ ಅವರ ಅತ್ಯುತ್ತಮ ಬೌಲಿಂಗ್ (9 ರನ್ಗೆ 5 ವಿಕೆಟ್) ತಂಡದ ವಿಜಯ ಪ್ರಧಾನ ಪಾತ್ರ ವಹಿಸಿದವು.
ಮೊದಲು ಬ್ಯಾಟಿಂಗ್ ನಡೆಸಿದ ಮಾಧವಕೃಪಾ ತಂಡವು 42 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದರೂ, ಅಶ್ವಿಜ್ ಅವರು ಐದು ಸಿಕ್ಸರ್ಗಳ ನೆರವಿನಿಂದ ಗಳಿಸಿ ಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 7 ವಿಕೆಟ್ಗೆ 217 ರನ್ ಗಳಿಸಿತು. ಉತ್ತರವಾಗಿ ಕುಂದಾಪುರದ ವೆಂಕಟರಮಣ ಕಾಲೇಜು ತಂಡ, 15.3 ಓವುಗಳಲ್ಲಿ 84ರನ್ಗಳಿಸಿ ಆಲೌಟಾಯಿತು.