ಲಾರಿ ಢಿಕ್ಕಿ; ಬೈಕ್ ಸಹ ಸವಾರ ಸಾವು

Update: 2018-10-24 16:23 GMT

ಬೈಂದೂರು, ಅ.24: ಲಾರಿಯೊಂದು ಢಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಸಹ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಶಿರೂರು ಚೆಕ್‌ಪೋಸ್ಟ್ ಬಳಿ ನಡೆದಿದೆ. ಮೃತ ಯುವಕನನ್ನು ಶಿರೂರು ಕೆಳಪೇಟೆಯ ಸುಭಾಶ್ ಎಂದು ಗುರುತಿಸಲಾಗಿದೆ.

ಶಿರೂರು ಮಾರ್ಕೆಟ್ ಬಳಿ, ಮೋಟಾರು ಸೈಕಲ್‌ನಲ್ಲಿ ಚಂದ್ರ ಅವರು ತನ್ನ ಸ್ನೇಹಿತ ಸುಭಾಶ್‌ರನ್ನು ಕುಳ್ಳಿರಿಸಿಕೊಂಡು ತೆರಳುತಿದ್ದಾಗ, ಭಟ್ಕಳದಿಂದ ಬೈಂದೂರು ಕಡೆಗೆ ವೇಗವಾಗಿ ಧಾವಿಸಿ ಬಂದ ಲಾರಿಯೊಂದು ರಸ್ತೆಯ ತೀರಾ ಎಡಬದಿಗೆ ಚಲಿಸಿ ಹಿಂದಿನಿಂದ ಬೈಕ್‌ಗೆ ಢಿಕ್ಕಿ ಹೊಡೆದಿತ್ತು. ಆಗ ಬೈಕ್‌ನಲ್ಲಿದ್ದ ಇಬ್ಬರೂ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದರು.

ಸಹಸವಾರ ಸುಭಾಶ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಸವಾರ ಚಂದ್ರರ ಎಡಕಾಲು ಮೂಳೆ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News