ರಾಷ್ಟ್ರಪತಿ ವೇದಗಳ ಮೇಲೆ ಪ್ರಮಾಣ ಸ್ವೀಕರಿಸುವ ಭಾರತದ ಕನಸು ಕಾಣುತ್ತಿದ್ದೇನೆ: ಕೇಂದ್ರ ಸಚಿವ ಸತ್ಯಪಾಲ್

Update: 2018-10-25 17:34 GMT

ಹೊಸದಿಲ್ಲಿ,ಅ.25: ಅಮೆರಿಕದ ಅಧ್ಯಕ್ಷರು ಬೈಬಲ್ ಮೇಲೆ ಪ್ರಮಾಣ ವಚನ ಸ್ವೀಕರಿಸುವಂತೆ ಭಾರತದಲ್ಲಿ ರಾಷ್ಟ್ರಪತಿ ವೇದಗಳನ್ನು ಸಾಕ್ಷಿಯಾಗಿಸಿ ಪ್ರಮಾಣ ವಚನ ಸ್ವೀಕರಿಸುವ ದಿನಗಳ ಕನಸನ್ನು ನಾನು ನೋಡುತ್ತಿದ್ದೇನೆ ಎಂದು ಕೇಂದ್ರ ಸಚಿನ ಸತ್ಯಪಾಲ್ ಸಿಂಗ್ ಗುರುವಾರ ತಿಳಿಸಿದ್ದಾರೆ.

ಆರ್ಯ ಸಮಾಜದ ನಾಲ್ಕು ದಿನಗಳ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸುವ ವೇಳೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವರಾದ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ. “ಅಮೆರಿಕದ ಅಧ್ಯಕ್ಷರು ಕೈಯಲ್ಲಿ ಬೈಬಲ್ ಹಿಡಿದು ಪ್ರಮಾಣ ವಚನ ಸ್ವೀಕರಿಸುವುದನ್ನು ನಾವು ಕಂಡಿದ್ದೇವೆ. ಹಾಗೆಯೇ ಭಾರತದ ರಾಷ್ಟ್ರಪತಿಗಳು ವೇದಗಳನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಕನಸನ್ನು ನಾನು ಕಾಣುತ್ತಿದ್ದೇನೆ” ಎಂದು ಸಿಂಗ್ ತಿಳಿಸಿದ್ದಾರೆ.

ದೇಶವನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳಿಗೆ ಋಷಿಗಳ ಬೋಧನೆಗಳೇ ಪರಿಹಾರವಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ದೇಶವು ತನ್ನ ಗತ ವೈಭವವನ್ನು ಮರಳಿ ಪಡೆಯಲು ವೇದಗಳತ್ತ ಮರಳಬೇಕು ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News