ದರ್ಶನ ಪಾತ್ರಿಗೆ ತಂಡದಿಂದ ಹಲ್ಲೆ: ದೂರು
Update: 2018-10-30 16:50 GMT
ಹಿರಿಯಡ್ಕ, ಅ.30: ಮನೆಗೆ ಬಂದ ತಂಡವೊಂದು ದರ್ಶನ ಪಾತ್ರಿಗೆ ಹಲ್ಲೆ ನಡೆಸಿ, ಚಿನ್ನದ ಸರ ಎಳೆದುಕೊಂಡು ಹೋಗಿರುವ ಘಟನೆ ಅ.29ರಂದು ರಾತ್ರಿ ಕುಕ್ಕೆಹಳ್ಳಿ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಕುಕ್ಕೆಹಳ್ಳಿಯ ಸೋಮ ಪಾನಾರ ಎಂದು ಗುರುತಿಸ ಲಾಗಿದೆ.
ಇವರು ಮನೆಯಲ್ಲಿರುವ ವೇಳೆ ಕಾರಿನಲ್ಲಿ ಬಂದ ಮೂರು ನಾಲ್ಕು ಮಂದಿ ಹೊರಗಡೆ ಕರೆದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಕುತ್ತಿಗೆಯಲ್ಲಿದ್ದ 33ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು ಕಾರಿನಲ್ಲಿ ಕೆ.ಜಿ ರೋಡ್ ಕಡೆ ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.