ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಮಂಗಳೂರು, ಅ.31: 2018ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡುವ ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಬುಧವಾರ ಘೋಷಿಸಿದ್ದು, ಸಾಧಕ ವ್ಯಕ್ತಿ, ಸಂಸ್ಥೆಗಳ ಹೆಸರುಗಳನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಕುಮಾರ್ ಪೆರ್ನಾಜೆ (ಕೃಷಿ), ಶೇಖರ ಭಂಡಾರಿ (ಸಾಹಿತ್ಯ), ಬೊಂಡಾಲ ಸಚ್ಚಿದಾನಂದ ಶೆಟ್ಟಿ (ಶಿಕ್ಷಣ), ಪಿ.ಎಂ. ಹಸನಬ್ಬ ಮೂಡುಬಿದಿರೆ (ಸಂಗೀತ), ದಿನಕರ ಇಂದಾಜೆ (ಪತ್ರಿಕೋದ್ಯಮ), ಲಕ್ಷಣ ಕುಂದರ್ (ಪತ್ರಿಕೋದ್ಯಮ), ವಿದ್ವಾನ್ ಶ್ರಾವಣ್ ಉಳ್ಳಾಲ (ನೃತ್ಯ), ನಾಗೇಶ್ ಎ. (ಕ್ರೀಡೆ), ಮಾಸ್ಟರ್ ಮುಹಮ್ಮದ್ ಶಾಮಿಲ್ ಅರ್ಷದ್ (ಕ್ರೀಡೆ), ಜಾನ್ ಚಂದ್ರನ್ (ಲಲಿತಕಲೆ), ಸದಾಶಿವ ಅಮೀನ್ (ಲಲಿತಕಲೆ), ಚಂದ್ರಶೇಖರ ನಾಣಿಲ್ (ಸಮಾಜ ಸೇವೆ), ಡಾ. ಐ.ಶಶಿಕಾಂತ್ ಜೈನ್ (ಸಮಾಜ ಸೇವೆ-ಯೋಗ), ಶಂಕರ ಬಿ.ಶೆಟ್ಟಿ ವಿರಾರ್ (ಸಮಾಜ ಸೇವೆ), ಕುರ್ನಾಡು ಶಿವಣ್ಣ ಆಚಾರ್ಯ (ಜಾನಪದ), ಗೋಪಾಲ ಶಿಬರೂರು (ಜಾನಪದ), ಡಾ.ಮನೋರಮ ರಾವ್ (ವೈದ್ಯಕೀಯ), ಡಾ.ದಿನೇಶ್ ಕದಂ (ವೈದ್ಯಕೀಯ) ಸಾಧಕರು.
ಸಂಘ ಸಂಸ್ಥೆಗಳು
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಸುಳ್ಯ (ಸಮಾಜ ಸೇವೆ), ಬಿಲ್ಲವ ಸೇವಾ ಸಮಾಜ ಕಂಕನಾಡಿ ಗರೋಡಿ (ಸಮಾಜ ಸೇವೆ), ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಸುಲ್ತಾನ್ ಬತ್ತೇರಿ- (ಸಮಾಜ ಸೇವೆ), ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ ಕದ್ರಿ (ಸಮಾಜ ಸೇವೆ), ತಣ್ಣೀರುಬಾವಿ ಮುಳುಗು ತಜ್ಞರ ತಂಡ ತಣ್ಣೀರು ಬಾವಿ (ಸಮಾಜ ಸೇವೆ), ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ (ಸಮಾಜ ಸೇವೆ), ಮದರ್ ಥೆರೆಸಾ ಹೋಂ ಫಾರ್ ದ ಡೈಯಿಂಗ್ ಡೆಸ್ಟಿಟ್ಯೂಸ್ ಫಳ್ನೀರ್ (ಸಮಾಜ ಸೇವೆ) ಸಂಘ ಸಂಸ್ಥೆಗಳನ್ನು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.