ಆರೆಸ್ಸೆಸ್ಸನ್ನು ತೀವ್ರವಾಗಿ ವಿರೋಧಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್: ಕಾಂಗ್ರೆಸ್
Update: 2018-10-31 15:23 GMT
ಹೊಸದಿಲ್ಲಿ, ಅ.31: ಭಾರತದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರು ಆರೆಸ್ಸೆಸ್ಸನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.
“ಇಂದು ಸರ್ದಾರ್ ಪಟೇಲರು ಬದುಕಿದ್ದರೆ ದೇಶದ ಕಲ್ಯಾಣಕ್ಕಾಗಿ ಮತ್ತೊಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು” ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್ “ಆರೆಸ್ಸೆಸ್ ಮತ್ತು ಅದರ ಸಿದ್ಧಾಂತಗಳು ಭಾರತದ ಗುರುತಿಗೆ ಅಪಾಯವನ್ನು ಸೃಷ್ಟಿಸಿದೆ” ಎಂದು 1948ರ ಪತ್ರಿಕೆಯ ಫೋಟೊವೊಂದನ್ನು ಪೋಸ್ಟ್ ಮಾಡಿದೆ.