ಸ್ವಯಂ ಗುಂಡು ಹಾರಿಸಿಕೊಂಡು ಸಚಿವರ ಗನ್ಮ್ಯಾನ್ ಆತ್ಮಹತ್ಯೆ
Update: 2018-10-31 16:41 GMT
ತಿರುವನಂತಪುರಂ, ಅ.31: ಕೇರಳದ ಜಲಸಂಪನ್ಮೂಲ ಸಚಿವ ಮ್ಯಾಥ್ಯೂ ಥಾಮಸ್ ಅವರ ಗನ್ಮ್ಯಾನ್ನ ಮೃತದೇಹ ಕೊಲ್ಲಂನ ನಿವಾಸದಲ್ಲಿ ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂನ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾಗಿರುವ 28ರ ಹರೆಯದ ಸುಜಿತ್ ಕೊಲ್ಲಂನಲ್ಲಿ ವಾಸಿಸುತ್ತಿದ್ದು ಕಳೆದ ಎರಡು ವರ್ಷಗಳಿಂದ ಸಚಿವ ಥಾಮಸ್ ಅವರ ಭದ್ರತೆಗೆ ನಿಯೋಜನೆಗೊಂಡಿದ್ದರು. ಮಂಗಳವಾರ ರಜೆಯಲ್ಲಿದ್ದ ಸುಜಿತ್ ಬುಧವಾರ ಅವರ ಮನೆಯಲ್ಲಿ ತಲೆಯಲ್ಲಿ ಗುಂಡೇಟಿನ ಗಾಯದೊಂದಿಗೆ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.
ಸುಜಿತ್ ಅವಿವಾಹಿತರಾಗಿದ್ದು ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವರೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.