ಕಳ್ಳತನ ಪ್ರಕರಣ: ಆರೋಪಿ ಸೆರೆ

Update: 2018-10-31 17:18 GMT

ಕೊಣಾಜೆ, ಅ. 31: ಕೊಣಾಜೆ ಠಾಣೆ ವ್ಯಾಪ್ತಿಯ ನರಿಂಗಾನದ ತೌಡುಗೋಳಿ ಕ್ರಾಸ್‍ನ ಮುಹಮ್ಮದ್ ಅಸ್ಮಾನ್ ಎಂಬವರ ಮನೆಯಿಂದ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನರಿಂಗಾನ ತೌಡುಗೋಳಿಯ ಅಬ್ದುಲ್ ಖಾದರ್ ತನ್ಸಿಫ್ ಎಂದು ಗುರುತಿಸಲಾಗಿದೆ.

ಅ.30ರಂದು ಮುಹಮ್ಮದ್ ಅಸ್ಮಾನ್  ಮನೆಯಿಂದ 19,000 ರೂ.ಕಳವಾಗಿತ್ತು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ 18,300 ರೂ.ವನ್ನು ವಶಪಡಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News