ಸಿಬಿಐ ಆಂತರಿಕ ಕಲಹ: ಮಧ್ಯವರ್ತಿಗೆ ಜಾಮೀನು ನಿರಾಕರಣೆ

Update: 2018-11-03 16:05 GMT

ಹೊಸದಿಲ್ಲಿ, ನ. 3: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಭಾಗಿಯಾಗಿರುವ ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮಧ್ಯವರ್ತಿ ಮನೋಜ್ ಪ್ರಸಾದ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ. ಜಾಮೀನು ನೀಡಲು ಇದು ಸೂಕ್ತ ಹಂತವಲ್ಲ ಎಂದು ಪ್ರತಿಪಾದಿಸಿ ಸಿಬಿಐಯ ವಿಶೇಷ ನ್ಯಾಯಾಧೀಶ ಸಂತೋಷ್ ಸ್ನೇಹಿ ಮನ್ನ್ ಅವರು ಪ್ರಸಾದ್ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ. ಆರೋಪಿ ಪ್ರಭಾವಿತ ವ್ಯಕ್ತಿ. ಜಾಮೀನು ಮೇಲೆ ಬಿಡುಗಡೆ ಮಾಡಿದರೆ ಮುಂದುವರಿಯುತ್ತಿರುವ ತನಿಖೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಸಿಬಿಐ ನ್ಯಾಯಾಲಯದಲ್ಲಿ ಪ್ರತಿಪಾದಿಸಿತ್ತು. ತನ್ನನ್ನು ಕಸ್ಟಡಿಯಲ್ಲಿ ಇರಿಸಿಕೊಳ್ಳುವುದರಿಂದ ವಿಚಾರಣೆಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಆದುದರಿಂದ ತನ್ನ ಕಸ್ಟಡಿ ಅನಗತ್ಯ ಎಂದು ಮನೋಜ್ ಪ್ರಸಾದ್ ಜಾಮೀನು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News