ಕೆಲವು ಪ್ರತಿಪಕ್ಷ ನಾಯಕರು ಎ.ಕೆ. 47ನಲ್ಲಿ ಗುಂಡು ಹಾರಿಸಿದಂತೆ ಸುಳ್ಳು ಹೇಳುತ್ತಾರೆ: ಪ್ರಧಾನಿ ಮೋದಿ

Update: 2018-11-03 17:28 GMT

ಹೊಸದಿಲ್ಲಿ, ನ. 3: ಪ್ರತಿಪಕ್ಷಗಳು ತಮ್ಮ ವಂಶಾಡಳಿತ ಉಳಿಸಲು ಕೈಜೋಡಿಸುತ್ತಿದ್ದರೆ, ಬಿಜೆಪಿ ದೇಶದ ಹಣೆಬರಹ ಬದಲಾಯಿಸಲು ಪ್ರಯತ್ನಿಸುತ್ತಿದೆ. ಕೆಲವು ರಾಜಕೀಯ ಪಕ್ಷದ ನಾಯಕರು ಸುಳ್ಳು ಹೇಳುವ ಯಂತ್ರಗಳಾಗಿದ್ದು, ಎ.ಕೆ. 47ನಿಂದ ಗುಂಡು ಹಾರಿಸಿದಂತೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಪ್ರತಿಪಕ್ಷಗಳ ಮೈತ್ರಿ ಬಗ್ಗೆ ಕಳವಳಗೊಳ್ಳಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಮೋದಿ, ಜನರು ಅವರನ್ನು ಸ್ವೀಕರಿಸಲಾರರು. ಋಣಾತ್ಮಕ ಕೆಲಸಗಳಿಗೆ, ದೇಶಕ್ಕೆ ಉತ್ತಮ ಕೆಲಸ ಮಾಡಿರುವುದನ್ನು ಪರಿಗಣಿಸಲು ನಿರಾಕರಿಸುವ, ಸೇನೆಯನ್ನು ನಿಂದಿಸುವ ಹಾಗೂ ಅವಮಾನ ಮಾಡುವ ಅವರನ್ನು ಜನರು ದ್ವೇಷಿಸುತ್ತಾರೆ ಎಂದು ಪ್ರತಿಪಕ್ಷಗಳ ಮೈತ್ರಿಯನ್ನು ಗುರಿಯಾಗಿರಿಸಿ ಮೋದಿ ಟೀಕಿಸಿದರು. ಕೆಲವು ನಾಯಕರು ಸುಳ್ಳು ಸಿಡಿಸುವ ಮೆಷಿನ್ ಗನ್‌ನಂತೆ. ಬಾಯಿ ತೆರೆದರೆ, ಎ.ಕೆ. 47ನಿಂದ ಗುಂಡು ಹಾರಿಸಿದಂತೆ ಸುಳ್ಳು ಹೇಳುತ್ತಾರೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News