ಬೆಳ್ಳಾರೆಯಲ್ಲಿ ಹಿಜಾಮಾ ಚಿಕಿತ್ಸಾ ಶಿಬಿರ

Update: 2018-11-04 11:29 GMT

ವಿಟ್ಲ, ನ. 4: ಬೆಳ್ಳಾರೆ ಹಿದಾಯ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್.ಕೆ.ಎಸ್.ಎಸ್‌.ಎಫ್ ಬೆಳ್ಳಾರೆ ಶಾಖೆ ವತಿಯಿಂದ ಲುಖ್ಮಾನಿಯ ಹೆಲ್ತ್ ರಿಸರ್ಚ್ ಸೆಂಟರ್ ವಿಟ್ಲ ಇದರ ಸಹಕಾರದೊಂದಿಗೆ ಹಿಜಾಮಾ ಚಿಕಿತ್ಸಾ ಶಿಬಿರವು ನಡೆಯಿತು.

ಬೆಳ್ಳಾರೆ ಜಮಾಅತ್ ಮುದರ್ರಿಸ್  ತಾಜುದ್ದೀನ್ ರಹ್ಮಾನಿ ಪ್ರಾರ್ಥನೆ ನೆರವೇರಿಸಿದರು.

ಜಮಾಅತ್ ಉಪಾಧ್ಯಕ್ಷ ಯು.ಎಚ್.ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಹಸೈನಾರ್ ಹಿಜಾಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಮದ್ರಸಾ ಮುಖ್ಯೋಪಾಧ್ಯಾಯರಾದ  ಮುಹಮ್ಮದ್ ಮುಸ್ಲಿಯಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ಇಮ್ರಾನ್,  ಜಮಾಅತ್ ಕಮಿಟಿ ಸದಸ್ಯರುಗಳಾದ ಅಬ್ದುಲ್ ಖಾದರ್ ಹಾಜಿ. ಬಿ, ಬಶೀರ್. ಬಿ.ಎ, ಯು.ಪಿ. ಬಶೀರ್, ಹಿದಾಯ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಹಂಝ.ಎಸ್.ಎಚ್, ನಝೀರ್ ಯು.ಎ, ಇಕ್ಬಾಲ್ ಬೆಳ್ಳಾರೆ, ಸಿದ್ದೀಖ್.ಬಿ, ಖಲಂದರ್ ಹಾಜಿ, ಹನೀಫ್ ಮುಸ್ಲಿಯಾರ್, ಸುಲೈಮಾನ್ ಮುಸ್ಲಿಯಾರ್, ಎಸ್.ಕೆ,ಎಸ್.ಎಸ್.ಎಫ್  ಬೆಳ್ಳಾರೆ ಶಾಖಾ ಅಧ್ಯಕ್ಷ ಅಝರುದ್ದೀನ್ ಎಂ, ವಿಖಾಯ ಚೆಯರ್ಮೆನ್ ಜಮಾಲುದ್ದೀನ್.ಕೆ.ಎಸ್, ಶಾಫಿ , ಆಶಿಖ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.

ಜಮಾಅತ್ ಆಡಳಿತ ಸಮಿತಿ ಸದಸ್ಯ ಬಶೀರ್. ಕೆ.ಎ ಸ್ವಾಗತಿಸಿ ಕಾರ್ಯದರ್ಶಿ ಬಶೀರ್ ಕಲ್ಲಪಣೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News