ಮೀನು ವ್ಯಾಪಾರಿಯ ಕೊಲೆಯತ್ನ: ದೂರು
Update: 2018-11-04 16:16 GMT
ಮಲ್ಪೆ, ನ.4: ಮೀನು ವ್ಯಾಪಾರಿಯೊಬ್ಬರಿಗೆ ಕಬ್ಬಿಣ ರಾಡ್ನಲ್ಲಿ ಹಲ್ಲೆ ನಡೆಸುವ ಮೂಲಕ ಕೊಲೆಗೆ ಯತ್ನಿಸಿರುವ ಘಟನೆ ನ. 4ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಮಲ್ಪೆಬಂದರಿ ಕೆಎಫ್ಡಿಸಿ ಐಸ್ಪ್ಲಾಂಟ್ ಬಳಿ ನಡೆದಿದೆ.
ಹಲ್ಲೆಗೆ ಒಳಗಾದವರನ್ನು ಕುಂದಾಪುರ ವಂಡ್ಸೆಯ ದಿನೇಶ್ ಬಿಲ್ಲವ ಎಂದು ಗುರುತಿಸಲಾಗಿದೆ. ಇವರು ತನ್ನ ಮಹೇಂದ್ರ ಸುಪ್ರೋ ಟೆಂಪೋದಲ್ಲಿ ಚಾಲಕ ಸತೀಶ್ರೊಂದಿಗೆ ಮೀನು ವ್ಯವಹಾರಕ್ಕಾಗಿ ಮಲ್ಪೆ ಬಂದರಿಗೆ ಆಗಮಿಸಿದ್ದು, ಈ ವೇಳೆ ಅಣ್ಣ ತಮ್ಮಂದಿರಾದ ಕೃಷ್ಣ, ಚಂದ್ರ, ಶೈಲೇಶ್ ಹಾಗೂ ಪರಿಚಯದ ಶರಣ್, ಆನಂದ ಗೌಡ, ಗಣೇಶ ಹಾಗೂ ಇತರ 5-6 ಮಂದಿ ಕೊಲೆ ಮಾಡುವ ಉದ್ಧೇಶದಿಂದ ಏಕಾಎಕಿ ಕಬ್ಬಿಣದ ಆಯುಧಗಳಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ.
ಈ ವೇಳೆ ತಡೆಯಲು ಬಂದ ಸತೀಶರಿಗೂ ಆರೋಪಿಗಳು ಹೊಡೆದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.