ನ.10ರಂದು ಉಚ್ಚಿಲದಲ್ಲಿ ಧಾರ್ಮಿಕ ಸಮ್ಮೇಳನ

Update: 2018-11-05 14:40 GMT

ಕಾಪು, ನ.5: ಎಸ್‌ವೈಎಸ್ ಉಚ್ಚಿಲ ಶಾಖೆಯ ಆಶ್ರಯದಲ್ಲಿ ಧಾರ್ಮಿಕ ಸಮ್ಮೇಳನ ಹಾಗೂ ನಾತೇ ಶರೀಫ್ ಕಾರ್ಯಕ್ರಮವು ಉಚ್ಚಿಲ ಭಾಸ್ಕರ ನಗರ ಮೈದಾನದಲ್ಲಿ ನ.10ರಂದು ಮಗ್ರೀಬ್ ನಮಾಝಿನ ಬಳಿಕ ಮರ್ಹೂಂ ಸುಹೈಲ್ ವೇದಿಕೆಯಲ್ಲಿ ಜರಗಲಿದೆ.

ಕಾರ್ಯಕ್ರಮವನ್ನು ಉಚ್ಚಿಲ ಸಯ್ಯದ್ ಅರಬಿ ಜುಮಾ ಮಸೀದಿಯ ಖತೀಬ್ ಇಸಾಖ್ ಫೈಝಿ ಉದ್ಘಾಟಿಸಲಿರುವರು. ಸೈಯದ್ ಜಾಫರ್ ತಂಙಳ್ ಕೋಟೇಶ್ವರ ಆಶೀರ್ವಚನ ನೀಡಲಿರುವರು. ಮುಖ್ಯ ಭಾಷಣಕಾರ ರಾಗಿ ಹಮೀದ್ ಫೈಝಿ ಕಿಲ್ಲೂರು ಭಾಗವಹಿಸಲಿರುವರು.

ನ.11ರಂದು ಮಗ್ರಿಬ್ ನಮಾಝಿನ ಬಳಿಕ ನೌಫಲ್ ಸಖಾಪಿ ಕಳಸ ಅವ ರಿಂದ ಮರಣ ಮತ್ತು ಮರಣ ನಂತರ ಜೀವನ ಕುರಿತು ಮತಪ್ರವಚನ ನಡೆ ಯಲಿದೆ. ನ.12ರಂದು ಸಮಾರೋಪ ಸಮಾರಂಭದಲ್ಲಿ ಸೈಯ್ಯದ್ ಶಿಹಾಬು ದ್ದೀನ್ ಸಖಾಫಿ ಕಿಲ್ಲೂರು ಆಶೀವರ್ಚನ ನೀಡಲಿರುವರು. ಬಳಿಕ ಅಹ್ಮದ್ ನಬೀಲ್ ಬೆಂಗಳೂರು ಇವರಿಂದ ನಾತೇ ಶರೀಫ್ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News