ಕಲ್ಲಿನಿಂದ ಹೊಡೆದು ಟಿಆರ್ ಎಸ್ ನಾಯಕನ ಕೊಲೆ

Update: 2018-11-06 08:31 GMT

ತೆಲಂಗಾಣ, ನ.6: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ನಾಯಕರೊಬ್ಬರನ್ನು ಕಲ್ಲಿನಿಂದ ಹೊಡೆದು ಕೊಂದ ಘಟನೆ ಇಲ್ಲಿನ ವಿಕಾರಾಬಾದ್ ನ ಸುಲ್ತಾನ್ ಪುರ ಗ್ರಾಮದಲ್ಲಿ ನಡೆದಿದೆ.

ಕಾಂಗ್ರೆಸ್ ನಾಯಕರಿಂದ ನಡೆದ ದಾಳಿಯಿದು ಎಂದು ಟಿಆರ್ ಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಕೊಲೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೃತಪಟ್ಟ ಟಿಆರ್ ಎಸ್ ಕಾರ್ಯಕರ್ತನನ್ನು ಪಿ. ನಾರಾಯಣ್ ರೆಡ್ಡಿ ಎಂದು ಗುರುತಿಸಲಾಗಿದೆ. ತನ್ನ ಬೆಂಬಲಿಗರೊಂದಿಗೆ ನಾರಾಯಣ್ ರೆಡ್ಡಿ ವೈಮನಸ್ಸು ಬೆಳೆಸಿಕೊಂಡಿದ್ದು, ಆಕ್ರೋಶಿತ ಬೆಂಬಲಿಗರು ಕಾಂಗ್ರೆಸ್ ಸೇರಿದ್ದರು ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News