ಸುರತ್ಕಲ್ : ಶರೀಅತ್ ಸಮ್ಮೇಳನ ಯಶಸ್ವಿಗಾಗಿ ಸಮಾಲೋಚನಾ ಸಭೆ

Update: 2018-11-06 11:24 GMT

ಸುರತ್ಕಲ್, ನ. 6: ಶರೀಅತ್ ಸಮ್ಮೇಳನ ಸಮಾಲೋಚನಾ ಸಭೆಯು ಸುರತ್ಕಲ್ ರೇಂಜ್  ಮೇನೇಜ್ಮೆಂಟ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ ಅಧ್ಯಕ್ಷತೆಯಲ್ಲಿ ಚೊಕ್ಕಬೆಟ್ಟು ಅಝೀಝಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಅಝೀಝ್ ದಾರಿಮಿ ಶರೀಅತ್ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆ ಯಾಗಿದೆ. ಯಾವುದೇ ಸನ್ನಿವೇಶ ವನ್ನು ಕಾನೂನು ಮಿತಿಯಲ್ಲಿ ನಿಂತು ಎದುರಿಸಬೇಕಾಗಿದೆ ಎಂದರು.

ಸಮ್ಮೇಳನದ ಪ್ರಚಾರಾರ್ಥ ಮೇನೇಜ್ಮೆಂಟ್ ಮತ್ತು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮ್  ವತಿಯಿಂದ ಮಹಲ್ಲುಗಳ ಭೇಟಿ ಮತ್ತು ವಾಹನ ಪ್ರಚಾರ ನಡೆಸಲು ತೀರ್ಮಾನ ಮಾಡಲಾಯಿತು.

ಸಭೆಯಲ್ಲಿ ಜಮಾತ್ ಅಧ್ಯಕ್ಷ ಮುಹಮ್ಮದ್ ಶರೀಫ್, ಮೇನೇಜ್ಮೆಂಟ್ ಕಾರ್ಯದರ್ಶಿ ಪುತ್ತುಮೋನು,ಇಮ್ತಿಯಾಝ್, ಲಿಯಾಖತ್ ಅಲಿ, ಶಾಹುಲ್ ಕದಿಕೆ ಮುಲ್ಕಿ, ಹಸೈನಾ ಎಂಕೆ ,ಶಾಹುಲ್ ಹಮೀದ್, ಬಾವುಂಞಿ, ಮುಹಮ್ಮದ್ ಬೊಳ್ಳೂರು, ಝೈನುದ್ದಿನ್, ಖಲೀಫಾ ಇಡ್ಯಾ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News