​ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡವಲ್ಲಿ ವಿಳಂಬ: ಯುವಕನಿಗೆ ತಂಡದಿಂದ ಹಲ್ಲೆ

Update: 2018-11-07 15:33 GMT

ಮಂಗಳೂರು, ನ.7: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಸಂದರ್ಭ ವಿಳಂಬವಾಗಿದ್ದನ್ನೇ ನೆಪವಾಗಿಟ್ಟು ಯುವಕನೋರ್ವನ ಮೇಲೆ ಮೂವರು ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯ ಕೈಕಂಬದ ಗಂಜಿಮಠ ಜಂಕ್ಷನ್‌ನಲ್ಲಿ ನಡೆದಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೈಕಂಬ ನಿವಾಸಿ ಶರೀಫ್(30) ಹಲ್ಲೆಗೊಳಗಾದ ಯುವಕ.

ಇವರು ಗಂಜಿಮಠದಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುತ್ತಿದ್ದರು. ಈ ಸಂದರ್ಭ ಸ್ವಲ್ಪ ವಿಳಂಬವಾಗಿದೆ. ಇದನ್ನೇ ನೆಪವಾಗಿಸಿಕೊಂಡು ಮೂವರು ಅಶ್ರಫ್ ಅವರನ್ನು ಪ್ರಶ್ನಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಅಶ್ರಫ್ ವಿರುದ್ಧ ಪ್ರತಿದೂರು ಕೂಡಾ ದಾಖಲಾಗಿದ್ದು, ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News