ತಲಪಾಡಿ: ಎಸ್‌ಡಿಪಿಐ ವತಿಯಿಂದ ಸನ್ಮಾನ ಕಾರ್ಯಕ್ರಮ

Update: 2018-11-08 13:52 GMT

ಬಂಟ್ವಾಳ, ನ. 8: ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ತಲಪಾಡಿ ಘಟಕದ ಸಭೆ, ಇಬ್ಬರು ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ತಲಪಾಡಿ ವಠಾರದಲ್ಲಿ ಬುಧವಾರ ನಡೆಯಿತು.

ಎಸ್‌ಡಿಪಿಐ ತಲಪಾಡಿ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್., ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಪುರಸಭಾ ಸದಸ್ಯ ಮುನೀಶ್ ಅಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜಮುಖಿ ಕಾರ್ಯದಲ್ಲಿ ಮತ್ತಷ್ಟು ತೊಡಗಿಕೊಳ್ಳುವುದರ ಜೊತೆಗೆ ಪಕ್ಷವನ್ನು ಇನ್ನಷ್ಟು ಬಲಪಡಿಸುವಂತೆ ಸಲಹೆ ನೀಡಿದರು.

ಇದೇ ವೇಳೆ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಅನ್ವರ್ ಕೆ.ಎಚ್. ಹಾಗೂ ಮುಹಮ್ಮದ್ ಬಿಎಂಟಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಅಕ್ಬರ್ ಅಲಿ, ಇಸಾಕ್ ತಲಪಾಡಿ, ಲತೀಫ್ ಬಿ.ಸಿ., ನಾಸಿರ್ ದುಬೈ, ಮುಹಮ್ಮದ್ ಅಲಿ, ಆಬಿದ್ ಅಲಿ, ಆರೀಫ್ ತಲಪಾಡಿ, ಸಲಾಂ, ನಾಸಿರ್, ಸದ್ದಾಂ ಮತ್ತಿತರರು ಹಾಜರಿದ್ದರು. ತಲಪಾಡಿ ಘಟಕ ಸದಸ್ಯ ಅಶ್ರಫ್ ಬಿಎಂಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News