ಕಿನ್ನಿಪದವು: ಜಗಳ ಬಿಡಿಸಲು ಹೋದವರಿಗೆ ಹಲ್ಲೆ; ದೂರು

Update: 2018-11-08 15:50 GMT

ಮಂಗಳೂರು, ನ.8: ಕಾರು ಮತ್ತು ಬೈಕ್ ಸವಾರರ ಜಗಳವನ್ನು ಬಿಡಿಸಲು ಹೋಗಿದ್ದ ಯುವಕರಿಬ್ಬರಿಗೆ ಹಲ್ಲೆ ನಡೆಸಿದ ಘಟನೆ ಕಿನ್ನಿಪದವು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ಕಿನ್ನಿಪದವು ನಿವಾಸಿಗಳಾದ ಇಲ್ಯಾಸ್, ಸರ್ಫ್ರಾಝ್ ಹಲ್ಲೆಗೊಳಗಾದ ಯುವಕರು.

ಇಂದು ಸಂಜೆ ವೇಳೆ ಕಿನ್ನಿಪದವು ಎಂಬಲ್ಲಿ ಕಾರಿಗೆ ಅಡ್ಡಬಂದ ವಿಚಾರದಲ್ಲಿ ಬೈಕ್ ಸವಾರರು ಮತ್ತು ಕಾರಿನಲ್ಲಿದ್ದ ವಾಮಂಜೂರಿನ ರಶೀದ್ ಮತ್ತು ತೌಸೀಫ್ ಎಂಬವರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಇದನ್ನು ಅಲ್ಲೇ ಪಕ್ಕದ ಅಂಗಡಿ ಬಳಿ ನಿಂತು ಗಮನಿಸುತ್ತಿದ್ದ ಇಲ್ಯಾಸ್ ಮತ್ತು ಸರ್ಫ್ರಾಝ್ ಜಗಳವನ್ನು ಬಿಡಿಸಲು ಹೋಗಿದ್ದಾರೆ. ಈ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಇಲ್ಯಾಸ್ ಮತ್ತು ಸರ್ಫ್ರಾಝ್ ಅವರ ಮೇಲೆ ರಶೀದ್ ಮತ್ತು ತೌಸೀಫ್ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News