ಯುವಕ ನಾಪತ್ತೆ
Update: 2018-11-10 16:31 GMT
ಹಿರಿಯಡ್ಕ, ನ.10: ಕೆಲಸಕ್ಕೆಂದು ಹೋದ ಯುವಕನೋರ್ವ ನಾಪತ್ತೆಯಾಗಿ ರುವ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.
ಹಿರಿಯಡ್ಕ ವೀರಭದ್ರ ದೇವಸ್ಥಾನದ ಬಳಿಯ ನಿವಾಸಿ ಗೋಪಾಲ್ ಕೃಷ್ಣ ನಾಯಕ್ ಎಂಬವರ ಮಗ ಸುನೀಲ್ (28) ಎಂದು ಗುರುತಿಸಲಾಗಿದೆ.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಣ್ಣನ ಆರೈಕೆ ಯಲ್ಲಿದ್ದ ಸುನೀಲ್, ನ.7ರಂದು ಬೈಕ್ನಲ್ಲಿ ಆತ್ರಾಡಿಯ ಆಭರಣ ಮೋಟಾರ್ಸ್ ನಲ್ಲಿ ಕೆಲಸಕ್ಕೆ ಹೋಗಿದ್ದರು. ಆದರೆ ಸುನೀಲ್ ಕೆಲಸಕ್ಕೆ ಹೋಗದೆ, ಮನೆಯ ಎದುರು ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.