ಮುದ್ರಾಡಿ: ಹಟ್ಟಿಯಿಂದ ದನಗಳ ಕಳವು

Update: 2018-11-12 15:37 GMT

ಹೆಬ್ರಿ, ನ.12: ಹಟ್ಟಿಯಲ್ಲಿದ್ದ ಆರು ದನಗಳು ಕಳವಾಗಿರುವ ಘಟನೆ ಮುದ್ರಾಡಿ ಗ್ರಾಮದ ಗುಡಾಲ್ಬೆಟ್ಟು ಎಂಬಲ್ಲಿ ನ.11ರಂದು ನಡೆದಿದೆ.

ಅಶೋಕ ಪೂಜಾರಿ ಎಂಬವರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ 10,000 ರೂ. ಮೌಲ್ಯದ ಆರು ಹಸುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News