ಇಸ್ಪೀಟ್ ಜುಗಾರಿ: ನಾಲ್ವರ ಬಂಧನ
Update: 2018-11-12 15:38 GMT
ಉಡುಪಿ, ನ.12: ನಗರದ ಸಿಟಿ ಬಸ್ನಿಲ್ದಾಣದ ಗೂಡಂಗಡಿಗಳ ಹಿಂಭಾಗ ನ.11ರಂದು ಸಂಜೆ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಉಮೇಶ (25), ಹಾವೇರಿ ಜಿಲ್ಲೆಯ ಬಸವರಾಜ್ (28), ಬಾಗಲಕೋಟೆ ಜಿಲ್ಲೆಯ ಭೀಮಪ್ಪ (58), ಗದಗ ಜಿಲ್ಲೆಯ ಮುತ್ತಪ್ಪ (35) ಬಂಧಿತ ಆರೋಪಿಗಳು. ಇವರಿಂದ 2,160 ರೂ. ನಗದು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.