ಕೋಟ ಸೊಸೈಟಿಯ ಬೇಳೂರು ಶಾಖೆಯಲ್ಲಿ ಕಳವಿಗೆ ಯತ್ನ

Update: 2018-11-12 15:43 GMT

ಕೋಟ, ನ.12: ಕೋಟ ಸಹಕಾರಿ ವ್ಯವಸಾಯ ಸಂಘ ಬೇಳೂರು ಶಾಖೆಗೆ ನ.10ರ ಸಂಜೆಯಿಂದ ನ.12ರ ಬೆಳಗಿನ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಬ್ಯಾಂಕಿನ ಬೇಳೂರು ಶಾಖೆಯ ವ್ಯವಸ್ಥಾಪಕ ಸುಧಾಕರ ಕೆ. ನ.10ರಂದು ಮಧ್ಯಾಹ್ನ ವ್ಯವಹಾರ ಮುಗಿದ ಬಳಿಕ ಬ್ಯಾಂಕಿನ ಎಲ್ಲಾ ಶಟರ್ ಬಾಗಿಲುಗಳನ್ನು ಪರಿಶೀಲಿಸಿ ಬೀಗ ಹಾಕಿ ಹೋಗಿದ್ದು, ನ.12ರಂದು ಮರಳಿ ಬಂದು ನೋಡಿ ದಾಗ ಈ ಕಳವು ಪ್ರಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕಿನ ಮುಖ್ಯ ದ್ವಾರದ ರೋಲಿಂಗ್ ಶೆಟರ್‌ನ ಬೀಗ ಮುರಿದಿರುವ ಕಳ್ಳರು, ಬ್ಯಾಂಕ್ ಸುತ್ತ ಮುತ್ತ ಅಳವಡಿಸಲಾಗಿದ್ದ ಮೂರು ಸಿಸಿ ಕ್ಯಾಮೆರಾ ಗಳನ್ನು ಮೇಲ್ಮುಖವಾಗಿ ತಿರುಗಿಸಿರುವುದು ಕಂಡುಬಂದಿದೆ. ಅಲ್ಲದೆ ಕಟ್ಟಡದ ವಿದ್ಯುತ್ ಸಂಪರ್ಕದ ಮೈನ್ಸ್ವಿಚ್‌ನ್ನು ತೆಗೆದಿದ್ದಾರೆನ್ನಲಾಗಿದೆ. ಆದರೆ ಬ್ಯಾಂಕ್ ಒಳಗಡೆ ಹೋಗಿ ಚಿನ್ನ ಮತ್ತು ನಗದನ್ನು ಪರಿಶೀಲಿಸಿದಾಗ ಯಥಾಸ್ಥಿತಿಯಲ್ಲಿದ್ದು ಯಾವುದೇ ಕಳ್ಳತನ ಆಗಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News