ಪ್ರತ್ಯೇಕ ಪ್ರಕರಣ: ಎರಡು ಬೈಕ್ ಕಳವು

Update: 2018-11-13 15:55 GMT

ಶಂಕರನಾರಾಯಣ, ನ.13: ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹದ ಬಳಿ ನ.12ರಂದು ಸಂಜೆ ವೇಳೆ ನಿಲ್ಲಿಸಿದ್ದ ದಾವಣಗೆರೆ ಮೂಲದ ಸಿದ್ಧಾಪುರ ನಿವಾಸಿ ಶಿವಕುಮಾರ್ ಬಿ.ಎನ್. ಎಂಬವರ 34 ಸಾವಿರ ರೂ. ಮೌಲ್ಯದ ಕೆಎ17-ಇಎಫ್- 5705 ನಂಬರಿನ ಬಜಾಜ್ ಡಿಸ್ಕವರಿ ಬೈಕ್ ಕಳ ವಾಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಕಾರ್ಕಳದ ಎಕ್ಸ್‌ಪ್ರೆಸ್ ಬೀಸ್ ಎಂಬ ಹೆಸರಿನ ಕಛೇರಿಯ ಎದುರುಗಡೆ ನ.11ರಂದು ಬೆಳಗ್ಗೆ ನಿಲ್ಲಿಸಿದ್ದ ಕುಕ್ಕುಂದೂರು ರೆಹಮಾನ್ ಎಂಬವರ 40 ಸಾವಿರ ರೂ. ಮೌಲ್ಯದ ಕೆಎ 20-ಇಆರ್-8465 ನಂಬರಿನ ಪಲ್ಸರ್ ಬೈಕ್ ಕಳವಾಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News