ಕರಾಟೆ: ಭವಿಶ್‌ಗೆ ಕಂಚಿನ ಪದಕ

Update: 2018-11-14 15:59 GMT

ಉಡುಪಿ, ನ.14: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ 4ನೆ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಉಡುಪಿಯ ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಭವಿಶ್ ಎನ್. ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಇವರು ಚಿಟ್ಪಾಡಿಯ ಕೃಷ್ಣವೇಣಿ ಪುತ್ರನಾಗಿದ್ದು, ಉಡುಪಿಯ ಸುಂದರಮ್ ಅವರ ಬಳಿ ಕರಾಟೆ ತರಬೇತಿ ಪಡೆಯುತ್ತಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News