ಮದುವೆಯಾಗುವಂತೆ ಬೆದರಿಕೆ: ಯುವಕ ಆತ್ಮಹತ್ಯೆ

Update: 2018-11-14 16:13 GMT

ಅಮಾಸೆಬೈಲು, ನ.14: ಮೊಬೈಲ್ ಕರೆ ಮಾಡಿ ಯುವತಿಯನ್ನು ಮದುವೆ ಯಾಗುವಂತೆ ಬೆದರಿಕೆ ಹಾಕಿದ ಪರಿಣಾಮ ಯುವಕನೊಬ್ಬ ಹೆದರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ರಟ್ಟಾಡಿ ಗ್ರಾಮದ ಹೆಮ್ಮಣ್ಣು ನಿವಾಸಿ ರವಿ ನಾಯ್ಕ ಎಂದು ಗುರುತಿಸಲಾಗಿದೆ. ಇವರು ನ.5ರಂದು ರಾತ್ರಿ ರಟ್ಟಾಡಿ ಬಳ್ಳಿಹಿತ್ಲು ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ನ.13ರಂದು ಶ್ರೀಧನ್ಯ ಎಂಬವರು ಮೃತರ ಸಹೋದರ ಬಸವ ನಾಯ್ಕ ಮೊಬೈಲ್ಗೆ ರವಿ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುರೇಂದ್ರ ಪೂಜಾರಿಯೊಂದಿಗೆ ಮಾತ ನಾಡಿದ ಮೊಬೈಲ್ ಸಂಭಾಷಣೆಯನ್ನು ಕಳುಹಿಸಿದ್ದರು.

ಆ ಸಂಭಾಷಣೆಯಲ್ಲಿ ಸುರೇಂದ್ರ ಪೂಜಾರಿಯು ಹುಡುಗಿಯ ವಿಷಯಕ್ಕೆ ಸಂಬಂಧಿಸಿದಂತೆ ರವಿಯೊಂದಿಗೆ ಹುಡುಗಿಯನ್ನು ಮದುವೆಯಾಗುವಂತೆ ಒತ್ತಡ ಹಾಕಿ ಜೀವ ಬೆದರಿಕೆಯೊಡ್ಡಿದ್ದನು. ಇದರಿಂದ ಹೆದರಿ ಮನನೊಂದ ರವಿ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಸವ ನಾಯ್ಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News