ಮೂಡುಬಿದಿರೆ ಕಂಬಳ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2018-11-15 13:16 GMT

ಮೂಡುಬಿದಿರೆ,ನ.15: ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಡಿ. 1 ರಂದು ಕಡಲಕೆರೆಯಲ್ಲಿ ನಡೆಯುವ ಕೋಟಿ- ಚೆನ್ನಯ ಕಂಬಳದ ಆಮಂತ್ರಣ ಪತ್ರಿಕೆಯನ್ನು ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಕಂಬಳವನ್ನು ಕಾನೂನಿನ ಚೌಕಟ್ಟಿನಲ್ಲಿ ಅಹಿಂಸಾತ್ಮಕವಾಗಿ ನಾವು ನಡೆಸಲು ಕಟಿಬದ್ಧರಾಗಬೇಕು.
ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ಸಹಕಾರ ನೀಡಬೇಕು. ನಾನು ಕಂಬಳಪ್ರಿಯ ಆದರೆ ಅನುಭವದ ಕೊರತೆಯಿದೆ. ಎಲ್ಲರನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು ಯಾವುದೇ ಗೊಂದಲಗಳಿಲ್ಲದೆ ನಡೆಸಲು ಗರಿಷ್ಠ ಪ್ರಯತ್ನ ನಡೆಸಿ ಮೂಡುಬಿದಿರೆಯ ಗೌರವವನ್ನು ಹೆಚ್ಚಿಸುವ ಕೆಲಸ ಮಾಡುವುದಾಗಿ ಹೇಳಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ ಕಂಬಳಕ್ಕಿರುವ ಕಾನೂನು ಅಡೆತಡೆಗಳ ಮಾಹಿತಿ ನೀಡಿ ಅಹಿಂಸಾತ್ಮಕ ಕಂಬಳ ನಡೆಸಲು ಎಲ್ಲರ ಸಹಕಾರ ಬಯಸಿದರು.

ಕೋಶಾಧಿಕಾರಿ ಭಾಸ್ಕರ ಎಸ್ ಕೋಟ್ಯಾನ್, ಪದಾಧಿಕಾರಿಗಳಾದ ಕೃಷ್ಣರಾಜ ಹೆಗ್ಡೆ, ಈಶ್ವರ ಕಟೀಲು, ಕೆ.ಪಿ ಸುಚರಿತ ಶೆಟ್ಟಿ, ಎಂ. ಎಸ್ ಕೋಟ್ಯಾನ್, ಕೆ.ಪಿ ಜಗದೀಶ್ ಅಧಿಕಾರಿ, ಬಾಹುಬಲಿ ಪ್ರಸಾದ್, ಕೆ. ಆರ್ ಪಂಡಿತ್, ಲಕ್ಷ್ಮಣ ಪೂಜಾರಿ, ಬೆಳುವಾಯಿ ಭಾಸ್ಕರ ಆಚಾರ್ಯ, ಸುಕೇಶ್ ಶೆಟ್ಟಿ ಮತ್ತಿತರರು  ಉಪಸ್ಥಿತರಿದ್ದರು.

ನ್ಯಾಯಾವಾದಿ ಸುರೇಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News