ಪತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2018-11-17 16:56 GMT

ಮಣಿಪಾಲ, ನ.17: ವೈಯಕ್ತಿಕ ಕಾರಣದಿಂದ ಮನನೊಂದ 80 ಬಡಗು ಬೆಟ್ಟು ರಾಜೀವ ನಗರ ನಿವಾಸಿ ಸುರೇಶ್ ಎಂಬವರ ಮಗ ವಿಘ್ನೇಶ್ (23) ಎಂಬವರು ನ.17ರಂದು ಬೆಳಗ್ಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ತಲ್ಲೂರು ಗ್ರಾಮದ ಕಂಬಳಗದ್ದೆ ರಸ್ತೆಯ ನಿವಾಸಿ ಪ್ರೇಮ ಶೆಡ್ತಿ(66) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.16ರಂದು ಮನೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News