ಉಳ್ಳಾಲದಲ್ಲಿ ಸೀರತ್ ಅಭಿಯಾನ

Update: 2018-11-17 17:38 GMT

ಮಂಗಳೂರು, ನ.17: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದಿಂದ ‘ಪ್ರವಾದಿ ಮುಹಮ್ಮದ್‌ರ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ರಾಜ್ಯವ್ಯಾಪಿ ಸೀರತ್ ಅಭಿಯಾನವನ್ನು ನ.30ರವರೆಗೆ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಉಳ್ಳಾಲ ಶಾಖೆಯು ಅಂತ್ಯ ಪ್ರವಾದಿಯ ನೈಜ ಪರಿಚಯಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಮನೆ ಮನೆಗೆ ಭೇಟಿ, ಊರ ಪ್ರಮುಖರ ಭೇಟಿ, ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ,  ನೇರ ಫೋನ್‌ಇನ್ (ನ.20ರಂದು ಸಂಜೆ 7 ಗಂಟೆಗೆ) ಕಾರ್ಯಕ್ರಮ, ಊರ ಗಣ್ಯರ ಸಭೆ, ವಾಹನ ಜಾಥಾ, ಕಾರ್ನರ್ ಸಭೆ ಹಾಗೂ ದೇರಳಕಟ್ಟೆಯಲ್ಲಿ ಸೀರತ್ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News