ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು

Update: 2018-11-18 17:16 GMT

ಮಂಗಳೂರು, ನ.18: ಮಂಗಳಾದೇವಿ ಸಮೀಪ ನ.8ರಂದು ನಡೆದ ಸ್ಕೂಟರ್ ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಪೃಥ್ವಿರಾಜ್ (18) ಎಂಬವರು ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ.

ಮೂಲತಃ ಉಡುಪಿ ನಿವಾಸಿಯಾಗಿದ್ದು, ನಗರದಲ್ಲಿ ಪಿಜಿಯಲ್ಲಿದ್ದುಕೊಂಡು ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನ.8ರಂದು ರಾತ್ರಿ ವೇಳೆ ಪೃಥ್ವಿರಾಜ್ ಮತ್ತು ಶ್ರೇಷ್ಠ್ (19) ಮೆಹೆಂದಿ ಕಾರ್ಯಕ್ರಮವನ್ನು ಮುಗಿಸಿ ಮಂಗಳಾದೇವಿಯಿಂದ ಕಾಶಿಯಾ ಜಂಕ್ಷನ್ ಕಡೆಗೆ ತೆರಳುತ್ತಿದ್ದಾಗ ಮಂಗಳಾದೇವಿ ಎಸ್‌ಬಿಐ ಎಟಿಎಂ ಬಳಿ ಕಾಶಿಯಾ ಜಂಕ್ಷನ್‌ನಿಂದ ಬರುತ್ತಿದ್ದ ಕಾಸರಗೋಡಿನ ರಾಮಕೃಷ್ಣನ್ (25) ಎಂಬವರು ಚಲಿಸುತ್ತಿದ್ದ ಬೈಕ್ ಢಿಕ್ಕಿಯಾಗಿದೆ. ಇವರಿಂದ ಮೂವರು ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಲಿಸದೆ ಪೃಥ್ವಿರಾಜ್ ಮೃತಪಟ್ಟಿದ್ದಾರೆ. ಉಳಿದಿಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. 

ಈ ಕುರಿತು ನಗರ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News