ಸಚಿವರ ಸಭೆ ರದ್ದು: ವಕ್ಫ್ ಅಧ್ಯಕ್ಷರಿಂದ ವಿಷಾಧ
Update: 2018-11-19 14:23 GMT
ಉಡುಪಿ, ನ.19: ಜಿಲ್ಲೆಯಲ್ಲಿ ನ.17ರಂದು ಪ್ರವಾಸ ಕೈಗೊಂಡ ಅಲ್ಪ ಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹಜ್ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಮಣಿಪಾಲ ರಜತಾದ್ರಿಯ ವಕ್ಫ್ ಸಲಹಾ ಸಮಿತಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಕಾರ್ಯ ಒತ್ತಡದಿಂದ ಅನಾನುಕೂಲವಾಗಿದ್ದು, ಇದರಿಂದ ಮಸೀದಿಯ ಪದಾಧಿಕಾರಿಗಳು, ವಕ್ಫ್ ಸದಸ್ಯರುಗಳು ಹಾಗೂ ಸಮುದಾಯದ ಮುಖಂಡರಿಗೆ ನಿರಾಶೆಯಾಗಿರುವುದು ವಿಷಾಧನೀಯ ಎಂದು ಸಮಿತಿಯ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ತಿಳಿಸಿದ್ದಾರೆ.
ಸಚಿವರು ಶೀಘ್ರದಲ್ಲೇ ಮತ್ತೆ ಜಿಲ್ಲೆ ಹಾಗೂ ವಕ್ಫ್ ಸಮಿತಿ ಕಚೇರಿಗೆ ಭೇಟಿ ನೀಡುವ ಭರವಸೆಯನ್ನು ನೀಡಿದ್ದಾರೆ. ಆದುದರಿಂದ ಎಲ್ಲರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.