ಮಂಗಳೂರು: 'ಮೀಲಾದುನ್ನಬಿ' ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು

Update: 2018-11-19 16:40 GMT

ಮಂಗಳೂರು, ನ.19: ದ.ಕ. ಜಿಲ್ಲೆಯಲ್ಲಿ ನ. 20ರಂದು ಮೀಲಾದುನ್ನಬಿ ಆಚರಿಸಲಿದ್ದು, ಈ ದಿನದಂದು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಈ ಪ್ರದೇಶದ ಸುತ್ತಮುತ್ತ ಸೂಕ್ತ ಸಂಚಾರ ಸುವ್ಯವಸ್ಥೆ ಬಂದೋಬಸ್ತ್ ನಿರ್ವಹಿಸಬೇಕಾಗಿದ್ದು, ಕಾರ್ಯಕ್ರಮದ ಸಮಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಸೂಚಿಸಿ ಆದೇಶಿಸಿದ್ದಾರೆ.

ನ. 20ರಂದು 4 ಗಂಟೆಯಿಂದ ಪ್ರಾರ್ಥನೆ ಮುಗಿದು ಜನರು ಮತ್ತು ವಾಹನಗಳು ತೆರಳುವ ತನಕ ಹಂಪನಕಟ್ಟೆಯಿಂದ ಬಾವುಟಗುಡ್ಡೆಯ ಮೂಲಕ ಡಾ.ಅಂಬೇಡ್ಕರ್ ವೃತ್ತಕ್ಕೆ ಚಲಿಸಬೇಕಾದ ವಾಹನಗಳು ಕೆಎಸ್‌ಆರ್ ರಸ್ತೆ ಅಥವಾ ಎಲ್.ಎಚ್.ಎಚ್. ಮೂಲಕ ಫಳ್ನೀರ್ ರಸ್ತೆಯ ಮೂಲಕ ಸಂಚರಿಸಬೇಕು. ಅದೇ ರೀತಿ ಅರವಿಂದ ಕಡೆಯಿಂದ ಸಿಟಿ ಸೆಂಟರ್‌ನಿಂದ ಬಾವುಟಗುಡ್ಡೆಗೆ ಬರುವ ರಸ್ತೆ (ಕೆಎಸ್‌ಆರ್ ರಸ್ತೆಯಿಂದ ಹಾಗೂ ಸಿಟಿ ಸೆಂಟರ್ ಪಾರ್ಕಿಂಗ್‌ನಿಂದ ಬಾವುಟಗುಡ್ಡೆಗೆ ಬರುವ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬಾವುಟಗುಡ್ಡೆ ರಸ್ತೆಯಲ್ಲಿ ಸಾಧ್ಯವಾದಷ್ಟು ರಸ್ತೆಯ ಬದಿಯಲ್ಲಿ ವಾಹನಗಳನ್ನು 45 ಡಿಗ್ರಿ ಕೋನದಲ್ಲಿ ತಾತ್ಕಾಲಿಕವಾಗಿ ಪಾರ್ಕ್ ಮಾಡುವುದು. ಹಂಪನಕಟ್ಟೆಯಿಂದ ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿದೆ. ಅದೇ ರೀತಿ ನಗರ ಕೇಂದ್ರ ಗ್ರಂಥಾಲಯದಿಂದ ವಿಜಯಾ ಬ್ಯಾಂಕ್ ತನಕ ರಸ್ತೆಯ ಎಡಬದಿ ಮಾತ್ರ ವಾಹನಗಳನ್ನು ತಾತ್ಕಾಲಿಕವಾಗಿ ಪಾರ್ಕ್ ಮಾಡುವುದು.

ಸರಕಾರಿ ರಜೆ 20 ರಂದು: ಮಂಗಳೂರು, ನ.1: ದ.ಕ. ಜಿಲ್ಲೆಯಲ್ಲಿ ನ.20ರಂದು ಎಲ್ಲ ಸರಕಾರಿ ಕಚೇರಿಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಈದ್- ಮಿಲಾದ್ ಸರಕಾರಿ ರಜೆಯನ್ನು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News