ಉಡುಪಿ: ನ.20ರಿಂದ ಪಿಂಚಣಿ -ಕಂದಾಯ ಅದಾಲತ್

Update: 2018-11-19 17:11 GMT

ಉಡುಪಿ, ನ.19: ಉಡುಪಿ ಜಿಲ್ಲಾಧಿಕಾರಿ ಆದೇಶದಂತೆ ತಾಲೂಕು ವ್ಯಾಪ್ತಿ ಯಲ್ಲಿ ಪಿಂಚಣಿ ಅದಾಲತ್ ಮತ್ತು ಕಂದಾಯ ಅದಾಲತ್ ನಡೆಯಲಿವೆ. ನ.20ರಂದು ಕುಂದಾಪುರ ತಾಲೂಕಿನಲ್ಲಿ ಮಧ್ಯಾಹ್ನ 3ರಿಂದ 4 ಗಂಟೆಯ ವರೆಗೆ ಪಿಂಚಣಿ ಅದಾಲತ್ ಮತ್ತು 4ರಿಂದ 5:30ರವರೆಗೆ ಕಂದಾಯ ಅದಾಲತ್, ನ.22ರಂದು ಬ್ರಹ್ಮಾವರ ತಾಲೂಕಿನಲ್ಲಿ ಬೆಳಗ್ಗೆ 10ರಿಂದ 11 ರವರೆಗೆ ಪಿಂಚಣಿ ಅದಾಲತ್ ಮತ್ತು 11:30ರಿಂದ ಮಧ್ಯಾಹ್ನ 1:30ರವರೆಗೆ ಕಂದಾಯ ಅದಾಲತ್, ನ.23ರಂದು ಕಾಪು ತಾಲೂಕಿನಲ್ಲಿ ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಪಿಂಚಣಿ ಅದಾಲತ್ ಮತ್ತು 4 ರಿಂದ 5:30ರವರೆಗೆ ಕಂದಾಯ ಅದಾಲತ್ ನಡೆಯಲಿದೆ.

ನ.27ರಂದು ಬೈಂದೂರು ತಾಲೂಕಿನಲ್ಲಿ ಬೆಳಗ್ಗೆ 10ರಿಂದ 11 ಗಂಟೆಯ ವರೆಗೆ ಪಿಂಚಣಿ ಅದಾಲತ್ ಮತ್ತು 11:30ರಿಂದ ಮಧ್ಯಾಹ್ನ 1:30ರವರೆಗೆ ಕಂದಾಯ ಅದಾಲತ್, ವಂಡ್ಸೆ ಹೋಬಳಿಯಲ್ಲಿ ಮಧ್ಯಾಹ್ನ 3ರಿಂದ 4ರವರೆಗೆ ಪಿಂಚಣಿ ಅದಾಲತ್ ಮತ್ತು 4ರಿಂದ 5:30ರವರೆಗೆ ಕಂದಾಯ ಅದಾಲತ್ ನಡೆಯಲಿದೆ.

ನ.28ರಂದು ಅಜೆಕಾರಿನಲ್ಲಿ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಪಿಂಚಣಿ ಅದಾಲತ್ ಮತ್ತು 11:30ರಿಂದ ಮಧ್ಯಾಹ್ನ 1:30ರವರೆಗೆ ಕಂದಾಯ ಅದಾಲತ್, ಕಾರ್ಕಳ ತಾಲೂಕಿನಲ್ಲಿ ಮಧ್ಯಾಹ್ನ 3:30ರಿಂದ 4:30ರವರೆಗೆ ಪಿಂಚಣಿ ಅದಾಲತ್ ಮತ್ತು 4:30ರಿಂದ 5:30ರವರೆಗೆ ಕಂದಾಯ ಅದಾಲತ್ ನಡೆಯಲಿದೆ.

ನ.29ರಂದು ಉಡುಪಿ ತಾಲೂಕಿನಲ್ಲಿ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಪಿಂಚಣಿ ಅದಾಲತ್ ಮತ್ತು 11:30ರಿಂದ ಮಧ್ಯಾಹ್ನ 1:30ರವರೆಗೆ ಕಂದಾಯ ಅದಾಲತ್, ನ.30ರಂದು ಕೋಟದಲ್ಲಿ ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಪಿಂಚಣಿ ಅದಾಲತ್ ಮತ್ತು 4 ರಿಂದ 5:30ರವರೆಗೆ ಕಂದಾಯ ಅದಾಲತ್ ನಡೆಯಲಿದೆ ಎಂದು ಕುಂದಾಪುರ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News