ಎಸ್ಸೆಸ್ಸೆಫ್ ಮಿತ್ತರಾಜೆ ಶಾಖೆಯ ವಾರ್ಷಿಕ ಸಭೆ
ಬಂಟ್ವಾಳ, ನ.21: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಮಿತ್ತರಾಜೆ ಶಾಖೆಯ ವಾರ್ಷಿಕ ಮಹಾಸಭೆಯು ನ.20ರಂದು ರಾತ್ರಿ ನಡೆಯಿತು.
ಅಬೂಬಕರ್ ಮದನಿ ಪಂಜರಕೋಡಿ ಪ್ರಾರ್ಥನೆಗೆ ನೇತೃತ್ವ ನೀಡಿದರು, ಶಾಖಾ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಂಚಿ ಸೆಕ್ಟರ್ ಅಧ್ಯಕ್ಷ ಅಸ್ಲಂ ಸಂಪಿಲ, ಶಾಖಾ ಉಸ್ತುವಾರಿ ಸಿದ್ದೀಕ್ ನೂಜಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವೀಕ್ಷಕರಾಗಿ ಆಗಮಿಸಿದ್ದರು.
ನೂತನ ಅಧ್ಯಕ್ಷರಾಗಿ ದಾವೂದ್ ಕಲ್ಲಕಟ್ಟ, ಉಪಾಧ್ಯಕ್ಷರಾಗಿ ರಫೀಕ್ ಮಿತ್ತರಾಜೆ ಮತ್ತು ಜಬ್ಬಾರ್ ಕಲ್ಲಕಟ್ಟ, ಪ್ರಧಾನ ಕಾರ್ಯದರ್ಶಿಯಾಗಿ ಯಝೀದ್ ಕಲ್ಲಕಟ್ಟ, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಹನೀಫಿ ಉಸ್ತಾದ್ ಮತ್ತು ಮಸೂದ್ ಕಲ್ಲಕಟ್ಟ, ಸಂಘಟನಾ ಕಾರ್ಯದರ್ಶಿಯಾಗಿ ನಾಸಿರ್ ಮಿತ್ತರಾಜೆ, ಕೋಶಾಧಿಕಾರಿಯಾಗಿ ನಾಸಿರ್ ಕಲ್ಲಕಟ್ಟ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಝೀರ್ ಮಿತ್ತರಾಜೆ ಹನೀಫ್ ಮಿತ್ತರಾಜೆ, ಯೂಸುಫ್, ಜಲೀಲ್, ಕಲೀಲ್ ಅವರನ್ನು ಆಯ್ಕೆ ಮಾಡಲಾಯಿತು.