ಶಿರೂರು: ರೈಲು ಢಿಕ್ಕಿ ಹೊಡೆದು ಮೃತ್ಯು

Update: 2018-11-21 17:44 GMT

ಬೈಂದೂರು, ನ.21: ಶಿರೂರು ರೈಲ್ವೆ ನಿಲ್ದಾಣದ ಬಳಿ ನ.20ರಂದು ಬೆಳಗ್ಗೆ ಚಲಿಸುತ್ತಿದ್ದ ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ರೈಲು ಹಳಿ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಶಿರೂರು ಗ್ರಾಮದ ಬಪ್ಪನಬೈಲು ಹೆರಿಯ ಅಣ್ಣಪ್ಪ ನಾಯ್ಕ(80) ಎಂದು ಗುರುತಿಸಲಾಗಿದೆ.

ಇವರು ಶಿರೂರು ಮಾರ್ಕೆಟ್‌ಗೆ ಸಾಮಾನು ತರಲು ಹೋಗಿದ್ದು, ಈ ವೇಳೆ ರೈಲ್ವೆ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆ ಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News