ಮುಝಫರ್‌ಪುರ ಆಶ್ರಯಧಾಮ ಪ್ರಕರಣ: ಮಂಜು ವರ್ಮಗೆ ಪೊಲೀಸ್ ಕಸ್ಟಡಿ

Update: 2018-11-22 17:03 GMT

ಪಾಟ್ನ, ನ.22: ಮುಝಫರ್‌ಪುರ ಆಶ್ರಯಧಾಮ ಲೈಂಗಿಕ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಬಿಹಾರದ ಮಾಜಿ ಸಚಿವೆ ಮಂಜು ವರ್ಮಾಗೆ ನ್ಯಾಯಾಲಯ ಒಂದು ದಿನದ ಪೊಲೀಸ್ ಕಸ್ಟಡಿ ವಿಧಿಸಿದೆ.

ಮಂಜು ವರ್ಮ ಬಿಹಾರದ ಸಮಾಜ ಕಲ್ಯಾಣ ಸಚಿವೆಯಾಗಿದ್ದರು. ಇವರ ಪತಿ ಚಂದ್ರಶೇಖರ್ ವರ್ಮ ಹಾಗೂ ಆಶ್ರಯಧಾಮ ಲೈಂಗಿಕ ಹಗರಣದ ಪ್ರಧಾನ ಆರೋಪಿ ಬೃಜೇಶ್ ಠಾಕುರ್ ಮಧ್ಯೆ ಸಂಪರ್ಕವಿದ್ದುದು ಬೆಳಕಿಗೆ ಬರುತ್ತಿದ್ದಂತೆ ಮಂಜು ವರ್ಮ ರಾಜೀನಾಮೆ ನೀಡಿ ಭೂಗತರಾಗಿದ್ದರು. ಇವರ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿತ್ತು. ಕಳೆದ ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದ ವರ್ಮರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಜಿಲ್ಲಾ ಪೊಲೀಸರು ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News