ರಾಜಸ್ಥಾನ: ಕಾಂಗ್ರೆಸ್‌ನಿಂದ 28 ನಾಯಕರ ಉಚ್ಛಾಟನೆ

Update: 2018-11-26 17:44 GMT

ಗುರಾದಾಸಪುರ, ನ. 26: ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ ಮಾಜಿ ಶಾಸಕರು ಹಾಗೂ ಮಾಜಿ ಕೇಂದ್ರ ಸಚಿವರು ಸೇರಿದಂತೆ ರಾಜಸ್ಥಾನದ 28 ನಾಯಕರನ್ನು ಕಾಂಗ್ರೆಸ್ ರವಿವಾರ ಪಕ್ಷದಿಂದ ಉಚ್ಛಾಟಿಸಿದೆ.

ರಾಜ್ಯ ಕಾಂಗ್ರೆಸ್ ವರಿಷ್ಠ ಸಚಿನ್ ಪೈಲೆಟ್ ನಿರ್ದೇಶನದಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ತಿಳಿಸಿದ್ದಾರೆ.

ಉಚ್ಛಾಟಿಸಲಾದ ನಾಯಕರಲ್ಲಿ ಮಾಜಿ ಕೇಂದ್ರ ಸಚಿವ ಮಹಾದೇವ್ ಸಿಂಗ್ ಖಂಡೇಲಾ, ಮಾಜಿ ಶಾಸಕ ಸನ್ಯಾಮ್ ಲೋಧಾ, ನಾಥುರಾಮ್ ಸಿನೋಡಿಯಾ, ನವಲ್ ಕಿಶೋರ್ ಮೀನಾ, ಖುಶ್‌ವೀರ್ ಸಿಂಗ್, ಸೋಹನ್ ನಾಯಕ್, ಸಿ.ಎಸ್. ಬೈಡ್, ರಮೇಶ್ ಚಂದ್ ಖಂಡೇವಾಲ್ ಹಾಗೂ ರಮೇಶ್ ಖಿಂಚಿ ಸೇರಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಎದುರು ಈ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ ಎಂದು ವಕ್ತಾರ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ವಿಧಾನ ಸಭೆ ಚುನಾವಣೆ ಡಿಸೆಂಬರ್ 7ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News