×
Ad

ಡೆಲ್ಟಾ ಕನ್‌ಸ್ಟ್ರಕ್ಷನ್ಸ್ ಚಾಂಪಿಯನ್ , ಬ್ಯಾರೀಸ್ ಪ್ರಾಪರ್ಟಿಸ್ ರನ್ನರ್ ಅಪ್

Update: 2018-11-29 19:11 IST

ಮಂಗಳೂರು, ನ. 29: ಮಂಗಳೂರಿನ ಚಾರ್ವಿ ಕಮ್ಯುನಿಕೇಷನ್ ಪ್ರೈ.ಲಿ. ಸಂಸ್ಥೆ  ಆಟೊ ಮ್ಯಾಟ್ರಿಕ್ಸ್,ಸಿದ್ದಿವಿನಾಯಕ ಎಂಟರ್ ಪ್ರೈಸಸ್,ಇನ್‌ಲ್ಯಾಂಡ್ ಬಿಲ್ಡರ್ಸ್, ಲ್ಯಾಂಡ್ ಲಿಂಕ್ಸ್ ಮತ್ತು ನಿರ್ಮಾಣ ಹೋಮ್ಸ್ ಇವುಗಳ ಸಹಭಾಗಿತ್ವದಲ್ಲಿ ಇತ್ತೀಚಿಗೆ ನಗರದ ಪಣಂಬೂರಿನ ಎನ್‌ಎಂಪಿಟಿ ಮೈದಾನದಲ್ಲಿ ಎಸ್‌ಬಿಐ ಕಾರ್ಪೊರೇಟ್ ಕ್ರಿಕೆಟ್ ಲೀಗ್ 2018ನ್ನು ಆಯೋಜಿಸಿತ್ತು. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್ ಅವರು,ಉದ್ಯೋಗಿಗಳನ್ನು ದೈನಂದಿನ ಒತ್ತಡದಿಂದ ಮುಕ್ತಗೊಳಿಸುವ ಉದ್ದೇಶದೊಂದಿಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕಾಗಿ ಇಂತಹ ಪಂದ್ಯಾವಳಿಯನ್ನು ನಡೆಸುತ್ತಿರುವುದು ಸಂತಸದ ವಿಷಯವಾಗಿದೆ. ಈ ಪಂದ್ಯಾವಳಿಯನ್ನು ಎಸ್‌ಬಿಐ ಮತ್ತು ಟಾಟಾ ಮೋಟರ್ಸ್ ಬೆಂಬಲಿಸಿರುವುದು ಪ್ರಶಂಸನೀಯವಾಗಿದೆ. ಚಾರ್ವಿ ಕಮ್ಯುನಿಕೇಷನ್ ಇಂತಹ ಇನ್ನಷ್ಟು ಪಂದ್ಯಾವಳಿಗಳನ್ನು ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ನಡೆಸಬೇಕು ಎಂದು ಹೇಳಿದರು.

ಎಸ್‌ಬಿಐನ ಚೀಫ್ ಮ್ಯಾನೇಜರ್ ಬಿ.ಸಿ.ಪದ್ಮನಾಭ ಮಯ್ಯ,ಮಂಗಳೂರು ವಲಯ ಕೆಎಸ್‌ಸಿಎ ಸಂಚಾಲಕ ಮನೋಹರ ಅಮೀನ್,ಆಟೊ ಮ್ಯಾಟ್ರಿಕ್ಸ್‌ನ ಜನರಲ್ ಮ್ಯಾನೇಜರ್ ಪ್ರಶಾಂತ ಮಲ್ಯ, ವಿಕಾಸ ಸಮೂಹ ಸಂಸ್ಥೆಗಳ ಸಲಹೆಗಾರ ಡಾ.ಅನಂತ ಪ್ರಭು,ಎಂಪಿಎಲ್‌ನ ಅಧ್ಯಕ್ಷ ಮುಹಮ್ಮದ್ ಸಿರಾಜುದ್ದೀನ್ ಮತ್ತು ಸಂಚಾಲಕ ಇಮ್ತಿಯಾಝ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಾ.ಅನಂತ ಪ್ರಭು ಅವರು ತಂಡಗಳಿಗೆ ಪ್ರಮಾಣವಚನವನ್ನು ಬೋಧಿಸಿದರು.

 ಡೆಲ್ಟಾ ಕನ್‌ಸ್ಟ್ರಕ್ಷನ್ಸ್ ಪಂದ್ಯಾವಳಿಯಲ್ಲಿ ವಿಜೇತ ತಂಡವಾಗಿ ಮೂಡಿಬಂದಿದ್ದು, 50,000 ರೂ ಬಹುಮಾನ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಬ್ಯಾರೀಸ್ ಪ್ರಾಪರ್ಟಿಸ್ ತಂಡವು ರನ್ನರ್ ಅಪ್ ಸ್ಥಾನದೊಂದಿಗೆ 25,000 ರೂ. ಬಹುಮಾನ ಮತ್ತು ಟ್ರೋಫಿಯನ್ನು ಗಳಿಸಿತು.

ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬ್ಯಾರೀಸ್ ಪ್ರಾಪರ್ಟಿಸ್‌ನ ಆಸಿಫ್, ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಡೆಲ್ಟಾ ಕನ್‌ಸ್ಟ್ರಕ್ಷನ್ಸ್‌ನ ದೀಪಕ್ ಮತ್ತು ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಬ್ಯಾರೀಸ್ ಪ್ರಾಪರ್ಟಿಸ್‌ನ ಫಯಾಝ್ ಅವರು ಗೆದ್ದುಕೊಂಡರು.

ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಎಸಿಸಿಇ(ಇಂಡಿಯಾ)ದ ಉಪಾಧ್ಯಕ್ಷ ವಿಜಯ ವಿಷ್ಣು ಮಲ್ಯ,ಎಸ್‌ಬಿಐನ ಚೀಫ್ ಮ್ಯಾನೇಜರ್‌ಗಳಾದ ಕಿರಣ ಕೆ.ಎಸ್. ಮತ್ತು ಸೇತುಮಾಧವ ರಾವ್,ಆಟೊ ಮ್ಯಾಟ್ರಿಕ್ಸ್‌ನ ಜಿಎಂ ಪ್ರಶಾಂತ ಮಲ್ಯ,ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಜ್  ಕುಮಾರ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ,ದ.ಕ.ಇದರ ಮಾಜಿ ಅಧ್ಯಕ್ಷ ಉರ್ಬಾನ್ ಪಿಂಟೋ, ಪಂದ್ಯಾವಳಿಯ ಸಂಘಟಕರಾದ ಚಾರ್ವಿ ಕಮ್ಯುನಿಕೇಷನ್‌ನ ನಿರ್ದೇಶಕ (ಮಾರ್ಕೆಟಿಂಗ್ ) ನಾಗೇಶ ಶಶಾಂಕ್ ಮತ್ತು ಮೊನಾರ್ಕ್ ಸ್ಟುಡಿಯೋದ ರಮಾನಂದ ಪೈ ಹಾಗೂ ಪಂದ್ಯಾವಳಿಯ ಸಂಘಟನಾ ಸಮಿತಿಯ ಸದಸ್ಯ ಮುಹಮ್ಮದ್ ಹಕೀಂ ಅವರು ಉಪಸ್ಥಿತರಿದ್ದರು.

ಪಂದ್ಯಾವಳಿಯ ಸಂದರ್ಭದಲ್ಲಿ ಟಾಟಾ ಪ್ಯಾಸೆಂಜರ್ ಕಾರುಗಳ ಅಧಿಕೃತ ಡೀಲರ್ ಆಗಿರುವ ಆಟೊ ಮ್ಯಾಟ್ರಿಕ್ಸ್ ಸಂಸ್ಥೆ ಟಾಟಾ ಟಿಯಾಗೋ,ನೆಕ್ಸಾನ್ ಮತ್ತು ಹೆಕ್ಸಾ ವಾಹನಗಳ ಪ್ರದರ್ಶನ ಹಾಗು ಟೆಸ್ಟ್ ಡ್ರೈವ್ ಏರ್ಪಡಿಸಿತ್ತು. ಪಂದ್ಯಾವಳಿಯ ವೀಕ್ಷಕರ ಪೈಕಿ ಓಷನ್ ಪರ್ಲ್ ಉದ್ಯೋಗಿ ರಕ್ಷಕ್ ಅವರು ಲಕಿ ವಿನರ್ ಆಗಿ ಆಯ್ಕೆಯಾಗಿದ್ದು,ಅವರಿಗೆ 5,000 ರೂ.ಗಳ ಗಿಫ್ಟ್ ವೋಚರ್ ಅನ್ನು ಆಟೊ ಮ್ಯಾಟ್ರಿಕ್ಸ್ ವಿತರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News