×
Ad

ಮಂಗಳೂರು ವೆಲ್ಫೇರ್ ಅಸೋಸಿಯೇಶನ್‌ಗೆ ಆಯ್ಕೆ

Update: 2018-11-29 22:56 IST

ಮಂಗಳೂರು, ನ.29: ನಗರದ ಬೋಳಾರದ ಮಂಗಳೂರು ವೆಲ್ಫೇರ್ ಅಸೋಸಿಯೇಶನ್‌ನ ಮಹಾಸಭೆಯು ಯೂಸುಫ್ ಖಾರ್‌ದಾರ್‌ರ ಅಧ್ಯಕ್ಷತೆಯಲ್ಲಿ ನ.18ರಂದು ಬೋಳಾರದ ಶಾದಿಮಹಲ್‌ನಲ್ಲಿ ಜರುಗಿ 21 ಸದಸ್ಯರನ್ನು ಆಯ್ಕೆ ಮಾಡಿತು.

ಬಳಿಕ ನ.27ರಂದು ಜರುಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಮುಂದಿನ 2 ವರ್ಷಕ್ಕೆ ಅಧ್ಯಕ್ಷರಾಗಿ ಯೂಸುಫ್ ಖಾರ್‌ದಾರ್, ಉಪಾಧ್ಯಕ್ಷರಾಗಿ ಎ. ರಶೀದ್ ಖಾನ್, ಶೇಖ್ ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿಯಾಗಿ ಮಹ್‌ಫೂಝ್ ಉರ್ ರಹ್ಮಾನ್, ಕೋಶಾಧಿಕಾರಿಯಾಗಿ ಝಾಹಿದ್ ಹುಸೈನ್, ಜೊತೆ ಕಾರ್ಯದರ್ಶಿಗಳಾಗಿ ಮಖ್‌ಬೂಲ್ ಅಹ್ಮದ್, ಶಬ್ಬೀರ್ ಹುಸೈನ್ ಅವರನ್ನು ಆಯ್ಕೆ ಮಾಡಿತು.

ಉಳಿದಂತೆ ಹನೀಫ್ ಮಾಸ್ಟರ್, ಆಸೀಫ್ ಶರ್ಫುದ್ದೀನ್, ಶೇಖ್ ಅಲಿ ಸಾಹೇಬ್, ಅಬ್ದುಲ್ ರಶೀದ್ ಬಿ., ಎ. ನಝೀರ್ ಖಾನ್, ಎಂ.ಎಸ್.ಝಾಹಿದ್, ಆಬಿದ್ ಅಸ್ಗರ್, ಖಲೀಲ್ ಎಂ.ಐ., ಖಾಲಿಕ್ ಎಸ್.ಎ., ಝಹೀರ್ ಅಹ್ಮದ್, ಬಶೀರ್ ಖಾನ್ ಎ., ಜಮೀರ್ ಅಂಬರ್, ಶೌಖತ್ ಹುಸೈನ್ ಕೆ., ಅನ್ವರ್ ಸಾಹೇಬ್ ಶೇಖ್ ಕಾರ್ಯಕಾರಿ ಸಮಿತಿ ಸದಸ್ಯರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News