ಕಿಸಾನ್ ಕಾಂಗ್ರೆಸ್ನಿಂದ ಬೆಳೆ ಸ್ಪರ್ಧೆ: ಬಹುಮಾನ ವಿತರಣೆ
ಕಾಪು, ಡಿ.3: ಉಡುಪಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಳೆ ಸ್ಪರ್ಧೆಯನ್ನು ಇತ್ತೀಚೆಗೆ ಪಾದೂರು ಯುಬಿಎಂಸಿ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳು ಬೆಳೆದ ತರಕಾರಿ ಬೆಳೆಯ ವಿಜೇತರುಗಳಿಗೆ ಬಹುಮಾನ ವನ್ನು ಶಾಲಾ ಸಭಾಭವನದಲ್ಲಿ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜಯಲಕ್ಷ್ಮೀ ಆಳ್ವ ಪಾದೂರು ಗುತ್ತು ಅಧ್ಯಕ್ಷೆತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ ಬಹುಮಾನ ವಿತರಿಸಿದರು.
ಕಾಪು ಬ್ಲಾಕ್ ಕಿಸನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜೆ.ಕೆ.ಆಳ್ಪ, ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಶಿರ್ವ ಮಕ್ಕಳಿಗೆ ಲಾಭದಾಯಕ ಕೃಷಿ ಕುರಿತು ಮಾಹಿತಿ ನೀಡಿದರು. ಸ್ಪರ್ಧೆಯಲ್ಲಿ ಪ್ರಥಮ ಮಾನ್ಯ ಕುಲಾಲ್, ದ್ವಿತೀಯ ಉನ್ನತಿ, ತೃತೀಯ ರಜನಿ ಮಂತ್ರಿ ಬಹುಮಾನವನ್ನು ಪಡೆದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಹೆರೂರು, ಶಿಕ್ಷಕಿಯರಾದ ಕುಮಾರಿ ಗಾಯತ್ರಿ, ಜ್ಯೋತಿ ಎಸ್.ಶೆಟ್ಟಿ, ವಿಶಾಲ, ಸವಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೈಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.